ಸುದ್ದಿ ಕಣಜ.ಕಾಂ | CITY | EDUCATION
ಶಿವಮೊಗ್ಗ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಕೊರೊನಾದಲ್ಲಿ ಪರೀಕ್ಷಾ ಶುಲ್ಕ ಏರಿಕೆ ಮಾಡಿದ್ದು ಅವೈಜ್ಞಾನಿಕ. ಇದು ವಿದ್ಯಾರ್ಥಿಗಳ ಮೇಲೆ ಹೊರ ಆಗುವ ಸಾಧ್ಯತೆ ಇದೆ. ಆರನೇ ಸೆಮಿಸ್ಟರ್ ಎಲ್ಲ ಕೋರ್ಸುಗಳ ಲಿಖಿತ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆದರೆ, ಪರೀಕ್ಷೆಗಳು ಸತತವಾಗಿ ಇರುವುದರಿಂದ ಓದಲು ಸಮಯ ಇಲ್ಲವಾಗಿದೆ. ಇದರಿಂದ ಮಾನಸಿಕ ಒತ್ತಡ ಉಂಟಾಗಲಿದೆ ಎಂದು ಎಬಿವಿಪಿ ಪದಾಧಿಕಾರಿಗಳು, ವಿದ್ಯಾರ್ಥಿಗಳು ಮನವಿಯಲ್ಲಿ ತಿಳಿಸಿದ್ದಾರೆ.
JOBS @ SHIVAMOGGA | ಎಸ್ಸೆಸ್ಸೆಲ್ಸಿ, ಕಾಮರ್ಸ್ ಪಾಸ್ ಆದವರಿಗೆ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಕೆಗೆ ಏಳೇ ದಿನ ಬಾಕಿ ಪೂರ್ಣ ಮಾಹಿತಿಗಾಗಿ ಕ್ಲಿಕ್ಕಿಸಿ
ಬೇಡಿಕೆಗಳೇನು?
- ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿಲ್ಲ. ಹೀಗಾಗಿ, ವಿಶ್ವವಿದ್ಯಾಲಯವು ಪೂರ್ಣ ಪ್ರಮಾಣದ ಪರೀಕ್ಷಾ ಶುಲ್ಕವನ್ನು ಮುಂದಿನ ಸೆಮಿಸ್ಟರ್ ಪರೀಕ್ಷೆಗಳಿಗೆ ಸರಿ ಹೊಂದಿಸಬೇಕು.
- ಮರು ಮೌಲ್ಯಮಾಪನದ ಫಲಿತಾಂಶ ಕೂಡಲೇ ಪ್ರಕಟಿಸಬೇಕು. ಪಾಸಾದ ವಿದ್ಯಾರ್ಥಿಗಳ ಶುಲ್ಕವನ್ನು ವಾಪಸ್ ಭರಿಸಬೇಕು.
- ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು ಮುಂದೂಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.
- ಎಲ್ಲ ಪಿಯುಸಿ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಿರುವುದರಿಂದ ಪ್ರವೇಶದಲ್ಲಿ ಏರಿಕೆ ಆಗಲಿದೆಮ ಹೀಗಾಗಿ, ಪದವಿ ಪ್ರವೇಶಾತಿಗೆ ಅವಕಾಶ ನೀಡಬೇಕು.
- ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸ್ಟೂಡೆಂಟ್ ಪೋರ್ಟಲ್ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ, ಆದಷ್ಟು ಬೇಗ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು.
ಪ್ರಮುಖರಾದ ಧನುಷ್ ಗೌಡ, ಅಭಿಷೇಕ್, ಸ್ವಾತಿ, ರಂಜೀತಾ, ಶಿಲ್ಪಾ, ಚಂದ್ರಶೇಖರ್, ಶ್ರೀಪಾದ್, ಲೋಹಿತ್, ಪ್ರವೀಣ್, ಅಕ್ಷಯ್ ಉಪಸ್ಥಿತರಿದ್ದರು.
ಶಿವಮೊಗ್ಗ ವಿಮಾನ ನಿಲ್ದಾಣ ಬ್ಲೂ ಪ್ರಿಂಟ್ ಬಗ್ಗೆ ಅಪಸ್ವರ, ವಿನ್ಯಾಸ ಬದಲಿಸದಿದ್ದರೆ ಕೋರ್ಟ್ ಮೊರೆಯ ಎಚ್ಚರಿಕೆ