ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ತಾಲೂಕಿನ ಜೋಗ ಜಲಪಾತದಲ್ಲಿರುವ ಗೂಡಂಗಡಿಗಳಿಗೆ ಕಳ್ಳರ ಕಾಟ ಶುರುವಾಗಿದೆ. ಸೋಮವಾರ ರಾತ್ರಿ ಇಲ್ಲಿ ಸರಣಿ ಕಳ್ಳತನ ಮಾಡಲಾಗಿದೆ.
ಗೂಡಂಗಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್, ಸಿಗರೇಟ್ ಕಳ್ಳತನ ಮಾಡಲಾಗಿದೆ.
READ | ಅರ್ಧ ಗಂಟೆಯಲ್ಲೇ ಮನೆ ಬೀಗ ಒಡೆದು ಕಳ್ಳತನ!
ಜೋಗದಲ್ಲಿ ಈ ಹಿಂದೆಯೂ ನಾಲ್ಕು ಸಲ ಕಳ್ಳತನ ಮಾಡಲಾಗಿದ್ದು, ಪದೇ ಪದೆ ಈ ಕೃತ್ಯ ನಡೆಯುತ್ತಲೇ ಇರುವುದರಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಕಳ್ಳತನಕ್ಕೇನು ಕಾರಣ?
ವಿಶ್ವವಿಖ್ಯಾತ ಜೋಗದಂತಹ ಪ್ರವಾಸಿ ತಾಣಗಳಲ್ಲಿ ಗೂಡಂಗಡಿಗಳಲ್ಲಿ ಸುಲಭವಾಗಿ ಸರಣಿ ಕಳ್ಳತನ ಮಾಡಲಾಗುತ್ತಿದ್ದು, ಇಲ್ಲಿಯ ಭದ್ರತೆಯ ಬಗ್ಗೆ ಪ್ರಶ್ನೆ ಹುಟ್ಟುವಂತಾಗಿದೆ. ಜೊತೆಗೆ, ಜೋಗ ಪರಿಸರದಲ್ಲಿ ಸರಿಯಾಗಿ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದಿಂದ ಕಳ್ಳತನಗಳು ನಡೆಯುತ್ತಿವೆ ಎನ್ನುತ್ತಾರೆ ಸ್ಥಳೀಯ ಗೂಡಂಗಡಿಯವರು. ಈ ಬಗ್ಗೆ ಜೋಗ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಥಳೀಯ ಪೊಲೀಸರು ಕ್ರಮ ವಹಿಸಬೇಕು ಎಂಬ ಒತ್ತಾಯ ಕೂಡ. ವ್ಯಕ್ತವಾಗಿದೆ.