ಸುದ್ದಿ ಕಣಜ.ಕಾಂ | DISTRICT | POLITICS
ಶಿವಮೊಗ್ಗ: ಭದ್ರಾವತಿಯಲ್ಲಿ ಪಿಪಿಪಿ (Public-private partnership) ಮಾದರಿಯಲ್ಲಿ ಮತ್ತೆ ಐರನ್ ಆ್ಯಂಡ್ ಸ್ಟೀಲ್ ಕೈಗಾರಿಕೆ ಪುನರಾರಂಭಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ರಾಜ್ಯ ನೌಕರರ ಭವನದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಶಿವಮೊಗ್ಗ ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಆಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ರಫ್ತುದಾರರ ಸಮಾವೇಶ ಮತ್ತು ರಫ್ತು ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಶಾಹಿ ಗಾರ್ಮೆಂಟ್ ಯೂನಿಟ್ ಗಳಿಂದ ಸುಮಾರು 20,000 ಉದ್ಯೋಗ ಸೃಷ್ಟಿಯಾಗಿದೆ. ಇಂಡಸ್ಟ್ರಿಯಲ್ ಕಾರಿಡಾರ್ ಆಗುವ ಹಂತದಲ್ಲಿದೆ.
ರಫ್ತಿಗೆ ಮುಖ್ಯವಾಗಿ ಬೇಕಾಗಿರುವ ವಿಮಾನ ನಿಲ್ದಾಣ 3,200 ಮೀಟರ್ ರನ್ ವೇ ಹೊಂದಿದೆ. ಉಡಾನ್ ಯೋಜನೆಯಲ್ಲಿ ಐದು ಪ್ರಮುಖ ಸಂಪರ್ಕದ ಮಾರ್ಗವನ್ನು ಕೇಂದ್ರಕ್ಕೆ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗದಲ್ಲಿವೆ 20,294 ಕೈಗಾರಿಕೆ
ಜಿಲ್ಲೆಯಲ್ಲಿ ಕೃಷಿ ಕ್ಷೇತ್ರ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳು ಭರದಿಂದ ಸಾಗಿವೆ. ಕೈಗಾರಿಕೆ ವಲಯದಲ್ಲೂ ಭದ್ರ ಬುನಾದಿ ಕಲ್ಪಿಸುವ ಕೆಲಸ ನಿರಂತರವಾಗಿ ನಡೆದಿದೆ. ಬೃಹತ್ ಮಧ್ಯಮ ಹಾಗೂ ಸಣ್ಣ ಈ ರೀತಿಯ 20,294 ಕೈಗಾರಿಕೆಗಳು ಶಿವಮೊಗ್ಗದಲ್ಲಿವೆ ಎಂದರು.
ಆರ್ಯ ವೈಶ್ಯ ನಿಗಮದ ಅಧಕ್ಷ ಡಿ.ಎಸ್.ಅರುಣ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್, ಎಂ.ಎ. ರಮೇಶ್ ಹೆಗ್ಡೆ, ಫೇವರ್ ಚಂದ್, ಉಮೇಶ್ ಶಾಸ್ತ್ರೀ, ಎ.ಎಂ.ಸುರೇಶ್ ಸೇರಿ ಇತರರು ಉಪಸ್ಥಿತರಿದ್ದರು.
https://www.suddikanaja.com/2021/02/17/house-for-workers-cm-bs-yadiyurappa-said-in-machenahalli/