ಸುದ್ದಿ ಕಣಜ.ಕಾಂ | CITY | BHARAT BANDH
ಶಿವಮೊಗ್ಗ: ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಸಾನ್ ಮಂಚ್ ಕರೆ ನೀಡಿರುವ ಭಾರತ್ ಬಂದ್ ಗೆ ಶಿವಮೊಗ್ಗದಲ್ಲೂ ಬೆಂಬಲ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ವಿನೋಬನಗರಲ್ಲಿರುವ ಎಪಿಎಂಸಿಯನ್ನು ಬಂದ್ ಮಾಡಲಾಗಿತ್ತು. ಎಂಪಿಎಂಸಿ ಮಾರುಕಟ್ಟೆ ವ್ಯಾಪಾರಿಗಳು ಬಂದ್ ಗೆ ಬೆಂಬಲ ವ್ಯಕ್ತ ಪಡಿಸಿದ್ದರಿಂದ ತರಕಾರಿ ಮಾರುಕಟ್ಟೆ ಬಂದ್ ಮಾಡಲಾಗಿತ್ತು. ಪರಿಣಾಮ ಇಂದು ನಗರಕ್ಕೆ ತಾಜಾ ತರಕಾರಿ ಸರಬರಾಜು ಆಗಿಲ್ಲ.
ಶಿವಮೊಗ್ಗದಲ್ಲಿ ಹೇಗಿತ್ತು `ಭಾರತ್ ಬಂದ್’, ವಿಡಿಯೋ ರಿಪೋರ್ಟ್
ರೈತರಿಂದ ಶಿವಮೊಗ್ಗ ನಗರದಾದ್ಯಂತ ಬೈಕ್ ಜಾಥಾ ಮಾಡಲಾಗಗಿದೆ. ಬೆಳ್ಳಬೆಳಗ್ಗೆಯೇ ಕನ್ನಡಪರ ಸಂಘಟನೆ, ರೈತ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಹಾಗೂ ರೈತರು ಬೆಳ್ಳಿಗೆ 7ಘಂಟೆಗೆ ನಗರದ ಗೋಪಿ ವೃತ್ತದಿಂದ ಹೊರಟು ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ಮಾಡಲಾಯಿತು.
ಬಿಗಿ ಪೊಲೀಸ್ ಭದ್ರತೆ
ಅಮೀರ್ ಅಹ್ಮದ್ ವೃತ್ತದಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ. ಡಿಎಆರ್ ವ್ಯಾನ್ ಗಳನ್ನು ನಿಯೋಜಿಸಲಾಗಿದೆ. ಆಟೋ, ಬಸ್ ಸಂಚಾರ ಎಂದಿನಂತಿದೆ. ಅಂಗಡಿ ಮುಂಗಟ್ಟುಗಳು ಸಹ ತೆರೆದಿವೆ.
https://www.suddikanaja.com/2021/09/25/shivamogga-support-to-bharat-bandha/