ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಡೆತ್ನೋಟ್ ವಾಟ್ಸಾಪ್ ಮೂಲಕ ಕಳುಹಿಸಿ ಭಾರಿ ಗಾಬರಿ ಸೃಷ್ಟಿಸಿರುವ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಗಿರಿರಾಜ್ ಅವರ ನಾಪತ್ತೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
READ | ಡೆತ್ ನೋಟ್ ಬರೆದಿಟ್ಟು ಡಿಸಿ ಕಚೇರಿ ಸಿಬ್ಬಂದಿ ನಾಪತ್ತೆ, ಕಾರಣವೇನು?
ನಾಪತ್ತೆಯಾಗುವುದಕ್ಕೂ ಮುಂಚೆ ಗಿರಿರಾಜ್ ಅವರು ಮಹಾವೀರ ವೃತ್ತದಲ್ಲಿರುವ ಎಟಿಎಂನಿಂದ 15 ಸಾವಿರ ರೂಪಾಯಿ ಪಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಜಾಡು ಹಿಡಿದು ತನಿಖೆ ನಡೆಸುತ್ತಿದ್ದಾರೆ. ತಮ್ಮ ಖಾತೆಯಿಂದ ಹಣ ಪಡೆದುಕೊಂಡು ಹೋಗಿರುವುದರಿಂದ ಬಹುಶಃ ಜೀವಕ್ಕೆ ಯಾವುದೇ ಹಾನಿ ಆಗಿರಲಿಕ್ಕಿಲ್ಲ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಆದರೆ, ಇಲ್ಲಿಯವರೆಗೆ ನಾಪತ್ತೆಯಾದ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.