ಸುದ್ದಿ ಕಣಜ.ಕಾಂ | CITY | SOLID WASTE MANAGEMENT
ಶಿವಮೊಗ್ಗ: ನಗರದಲ್ಲಿ ಕಸ ವಿಲೇವಾರಿ `ಸ್ಮಾರ್ಟ್’ ಆಗಿ ನಿರ್ವಹಿಸಬೇಕು ಎಂಬ ಉದ್ದೇಶದಿಂದ ಮಹಾನಗರ ಪಾಲಿಕೆಯು ಹಸಿರು ಮತ್ತು ನೀಲಿ ಬಣ್ಣದ ಬುಟ್ಟಿಗಳನ್ನು ವಿತರಣೆ ಮಾಡುತ್ತಿದೆ. ಈ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಗಿದೆ.
ನಗರದ ಪಾಲಿಕೆ ಕಚೇರಿ ಆವರಣದಲ್ಲಿ ನಡೆದ ವಿಧ್ಯುಕ್ತ ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಾಂಕೇತಿಕವಾಗಿ ಬಕೆಟ್ಗಳನ್ನು ವಿತರಣೆ ಮಾಡಿದರು.
ಪಾಲಿಕೆ ವ್ಯಾಪ್ತಿಯ ಮನೆಗಳಿಂದ ತ್ಯಾಜ್ಯ ಸಂಗ್ರಹಣೆಗಾಗಿ ಖರೀದಿಸಲಾಗಿರುವ ಕಸದ ಬುಟ್ಟಿಗಳನ್ನು ನಗರವಾಸಿಗಳಿಗೆ ಸಾಂಕೇತಿಕ ವಿತರಣೆ ಮಾಡಲಾಯಿತು.
84,3000 ಮನೆಗಳಿಗೆ ಕಸದ ಬುಟ್ಟಿ ವಿತರಣೆ ಮಾಡುವ ಉದ್ದೇಶವಿದೆ. ಹಸಿ ಮತ್ತು ಒಣ ಕಸ ಪ್ರತ್ಯೇಕಗೊಳಿಸಲು ಬಕೆಟ್ ವಿತರಣೆಗೆ ಈ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಅಂದಾಜು ₹1.38 ಕೋಟಿ ವೆಚ್ಚದಲ್ಲಿ ಕಸದ ಬುಟ್ಟಿ ಖರೀದಿ ಮಾಡಲಾಗಿದೆ.
ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷ ನಾಯಕ ಎಸ್.ಎನ್. ಚನ್ನಬಸಪ್ಪ, ಸದಸ್ಯರಾದ ಇ.ವಿಶ್ವಾಸ್, ಸುರೇಖಾ ಮುರುಳಿಧರ್, ಎಚ್.ಸಿ.ಯೋಗೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
https://www.suddikanaja.com/2020/12/08/shivamogga-city-corporation-failed-to-segregate-solid-waste/