ಸುದ್ದಿ ಕಣಜ.ಕಾಂ | KARNATAKA | CRIME
ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ ಯುವಕರಿಗೆ ಬುದ್ಧಿ ಹೇಳಿದ್ದಕ್ಕಾಗಿ ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್ ಮುಖ್ಯಸ್ಥ ಡಿ.ವಿ.ಗಿರೀಶ್ ಸೇರಿ ಅವರೊಂದಿಗಿದ್ದರ ಮೇಲೆ ಹಲ್ಲೆ ಮಾಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಖ್ಯಾತಿ ಪರಿಸರವಾದಿ, ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್ ಮುಖ್ಯಸ್ಥ ಡಿ.ವಿ.ಗಿರೀಶ್ ಅವರ ಮೇಲಿನ ಹಲ್ಲೆ ವಿಡಿಯೋ ವೀಕ್ಷಿಸುವುದಕ್ಕಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ (VIDEO REPORT)
ತಾಲೂಕಿನ ಕಂಬಿಹಳ್ಳಿ ಸಮೀಪ ಎಂಟು ಜನ ಯುವಕರ ಗುಂಪೊಂದು ದಾಳಿ ನಡೆಸಿದ್ದು, ಅವರ ವಿರುದ್ಧ ಮಂಗಳವಾರ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಿರೀಶ್ ಅವರು ಸ್ನೇಹಿತರಾದ ಶ್ರೀಪಾಲ್ ಜೈನ್, ಜಬೀವುಲ್ಲಾ, ಕೀರ್ತಿ ಕುಮಾರ್, ಪಿ.ಕೆ.ದಿನೇಶ್ ಹಾಗೂ ದಿನೇಶ್ ಪುತ್ರಿಯೊಂದಿಗೆ ಕೆಮ್ಮಣ್ಣಗುಂಡಿ ಸಮೀಪದ ಕ್ರಿಸ್ಟೋಫರ್ ಅವರ ಕಟ್ಟೆಹೊಳೆ ಎಸ್ಟೇಟ್ ಗೆ ಹೋಗಿ ವಾಪಸ್ ಬರುತ್ತಿದ್ದಾಗ ಸೋಮವಾರ ಸಂಜೆ ಘಟನೆ ನಡೆದಿದೆ. ಸಂತವೇರಿ ಎರಡನೇ ಕ್ರಾಸ್ ಸಮೀಪ ಮೂರು ಬೈಕ್ ಗಳಲ್ಲಿ ನಿಲ್ಲಿಸಿಕೊಂಡಿದ್ದ ಯುವಕರ ಗುಂಪೊಂದು ಜಿಪ್ಸಿ ಜೀಪ್ ಹತ್ತಿರ ಬರುತ್ತಿದ್ದಂತೆಯೇ ಬಾಲಕಿಯನ್ನು ಚುಡಾಯಿಸಿದ್ದಾರೆ. ಇದಕ್ಕೆ ಗಿರೀಶ್ ಅವರು ಬುದ್ಧಿವಾದ ಹೇಳಿದ್ದಾರೆ. ನಂತರ, ಜಿಪ್ಸಿ ಮುಂದೆ ಬಂದಿದೆ. ಆಗ ಕಂಬಿಹಳ್ಳಿ ಸಮೀಪ ಬರುತ್ತಿದ್ದಂತೆಯೇ ಗಿರೀಶ್ ಅವರಿಗೆ ಹೊರಗೆಳೆದು ಥಳಿಸಿದ್ದಾರೆ. ನಂತರ, ಕಲ್ಲು ತೂರಾಟ ಮಾಡಲಾಗಿದ್ದು, ಕೀರ್ತಿಕುಮಾ ಅವರ ತುಟಿ, ಬಾಯಿಗೆ ಗಾಯವಾಗಿದೆ. ಬಾಲಕಿಯನ್ನು ಕೈಹಿಡಿದು ಎಳೆಯಲಾಗಿದೆ.
ಹೊನ್ನಾಳಿ ರಸ್ತೆಯಲ್ಲಿ ಚಾಕು ತೋರಿಸಿ ದರೋಡೆ ಮಾಡಿದವರು ಅರೆಸ್ಟ್, ವಿಚಾರಣೆ ವೇಳೆ ಬೆಳಕಿಗೆ ಬಂದ ವಿಷಯಗಳೇನು?
ಯಾರ ವಿರುದ್ಧ ಪ್ರಕರಣ ದಾಖಲು
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ 149 (ಅಕ್ರಮವಾಗಿ ಗುಂಪು ಸೇರುವುದು), 323, 324 (ಹಲ್ಲೆ), 341 (ಅಕ್ರಮವಾಗಿ ತಡೆಯುವುದು), 504 (ಶಾಂತಿ ಕದಡುವುದು), 506 (ಜೀವ ಬೆದರಿಕೆ), ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ವೈರಲ್ ಆಯ್ತು ವಿಡಿಯೋ
ಯುವಕರಿಬ್ಬರು ಗಿರೀಶ್ ಅವರಿಗೆ ಥಳಿಸಿ, ಜೀಪ್ ನಿಂದ ಇಳಿದ ಇನ್ನೊಬ್ಬರ ಕಪಾಳಕ್ಕೆ ಹೊಡೆಯಲಾಗಿದೆ. ಜತೆಗೆ, ಅವಾಚ್ಯ ಪದಗಳಿಂದ ನಿಂದಿಸಲಾಗಿದೆ. ಇದೆಲ್ಲ ವಿಡಿಯೋ ತುಣುಕಿನಲ್ಲಿ ರೆಕಾರ್ಡ್ ಆಗಿದೆ.
ಇನ್ನೂ ಸಿಕ್ಕಿಲ್ಲ ಆರೋಪಿಗಳು
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆರೋಪಿಗಳ ಪತ್ತೆ ಕಾರ್ಯ ಜೋರಾಗಿದೆ. ಯುವಕರ ಗುಂಪಿನ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.