ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಕಟ್ಟೆಸುಬ್ಬಣ್ಣ ಚೌಟ್ರಿ ಹಿಂಭಾಗದ ಕೆರೆಯ ಪಕ್ಕದ ಹೊಂಡದಲ್ಲಿ ಈಜಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಸಂಭವಿಸಿದೆ.
ಆಲ್ಕೊಳದ ನಂದಿನಿ ಬಡಾವಣೆ ನಿವಾಸಿ ಸಂದೇಶ್ (16) ಮೃತ ಬಾಲಕ. ತನ್ನ ಸ್ನೇಹಿತರೊಂದಿಗೆ ಈಜಲು ಹೋಗಿ, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆಂದು ಮೃತ ಬಾಲಕನ ಪೆÇೀಷಕರು ದೂರು ನೀಡಿದ್ದಾರೆ.
ಸುಮಾರು 10 ಅಡಿ ಆಳದ ಪುಷ್ಕರಣಿ (ಹೊಂಡ)ದಲ್ಲಿ ಬಾಲಕ ಮುಳುಗಿ ಮೃತಪಟ್ಟಿದ್ದಾನೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.