ಸುದ್ದಿ ಕಣಜ.ಕಾಂ | KARNATAKA | WILD LIFE
ಶಿವಮೊಗ್ಗ: ಪಶ್ಚಿಮಘಟ್ಟದಲ್ಲಿ ಕಾಳಿಂಗ ಸರ್ಪದ ಸಂತತಿ ಇಳಿಕೆ ಆಗುತ್ತಿದೆ ಎಂದು ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಗೌರಿಶಂಕರ್ ತಿಳಿಸಿದರು.
ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಕಾಡುಗಳ ವಿನಾಶದಿಂದ ಕಾಳಿಂಗ ಸರ್ಪಗಳ ಸಂತತಿ ಕೂಡ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
https://www.suddikanaja.com/2021/09/09/study-on-king-cobra/
ಕಾಳಿಂಗ ಸಂಖ್ಯೆ ಕಡಿಮೆ ಆದರೆ ಮಾನವನ ಮೇಲೆ ವ್ಯತಿರಿಕ್ತ ಪರಿಣಾಮ
ಕಾಳಿಂಗ ಸರ್ಪಗಳು ಇತರೆ ಹಾವುಗಳನ್ನು ನುಂಗುವುದರಿಂದ ಈ ಹಾವುಗಳ ಸಂತತಿ ಕಡಿಮೆಯಾಗಿ ಅದರಿಂದ ಮಾನವರು ಮರಣ ಹೊಂದುವ ಸಂಖ್ಯೆ ಕಡಿಮೆಯಾಗುತ್ತದೆ. ಈ ಕಾರಣಕ್ಕಾಗಿ ಕಾಳಿಂಗ ಮಾನವನಿಗೆ ಸಹಕಾರಿ ಎಂದರು.
ಸುಮಾರು 25 -30 ವರ್ಷಗಳ ಕಾಲ ಬದುಕುವ ಈ ಜೀವಿಗಳು ಮನುಷ್ಯನಿಗೆ ವಿನಾಕಾರಣ ತೊಂದರೆ ಕೊಡುವುದಿಲ್ಲ ಎಂದು ತಿಳಿಸಿದರು.
ಕಾಳಿಂಗ ಸರ್ಪಗಳ ಸಂಖ್ಯೆ ಇಳಿಕೆಯಾದರೆ ಮನುಷ್ಯರಿಗೆ ಆಪತ್ತು! ಎಷ್ಟು ಪ್ರಭೇದದ ಕಿಂಗ್ ಕೋಬ್ರಾಗಳಿವೆ? (VIDEO REPORT)
ಹಾವಿನ ಮೊಟ್ಟೆ ನಾನು ಕದ್ದಿಲ್ಲ
ಗೌರಿಶಂಕರ್ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ. ‘ಕಾಳಿಂಗದ ಗೂಡು ಹಾಳಾಗಿತ್ತು. ಹನಿ ನೀರು ಸಹ ಮೊಟ್ಟೆಗಳ ಪಾಲಿಗೆ ಎರವಾಗುವ ಸಾಧ್ಯತೆ ಇತ್ತು. ಆದ್ದರಿಂದ, ಮೊಟ್ಟೆಗಳಿಗೆ ಕೃತಕ ಗೂಡು ಸೃಷ್ಟಿಸಿ ಅವುಗಳ ಆರೈಕೆ ಮಾಡಿದ್ದೇನೆ. ಕೆಲವರು ಸುಳ್ಳು ಪುಕಾರು ಹಬ್ಬಿಸಿದ್ದಾರೆ ಹೇಳಿದರು.
ಸಾಮಾನ್ಯವಾಗಿ 33 ಮೊಟ್ಟೆಗಳಲ್ಲಿ ಒಂದೆರಡು ಮಾತ್ರ ಮರಿಯಾಗುತ್ತವೆ ಅಷ್ಟೇ. ಈ ವಿಷಯವನ್ನು ನಾನು ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು.
https://www.suddikanaja.com/2020/11/28/ias-kas-training-program-in-shivamogga/