ಸುದ್ದಿ ಕಣಜ.ಕಾಂ | DISTRICT | EDUCATION
ಶಂಕರಘಟ್ಟ(ಶಿವಮೊಗ್ಗ): ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆ ಅಡಿ ಕರ್ನಾಟಕ ಸರ್ಕಾರ ನೀಡುತ್ತಿರುವ ಅನುದಾನವನ್ನು ಕುವೆಂಪು ವಿವಿ ಕ್ರಿಯಾಯೋಜನೆಯ ಅನ್ವಯ ಸರ್ಮಪಕವಾಗಿ ಅನುಷ್ಠಾನಗೊಳಿಸುತ್ತಾ ಬಂದಿದೆ. ಆದ್ದರಿಂದ ಈ ಅನುದಾನವನ್ನು 2021-22ನೇ ಸಾಲಿಗೂ ಕೂಡ ಮುಂದುವರಿಸಬೇಕೆಂದು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಘಟಕದ ವತಿಯಿಂದ ಸೋಮವಾರ ಸಿಂಡಿಕೇಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
JOBS IN SHIVAMOGGA | ಎಸ್ಸೆಸ್ಸೆಲ್ಸಿ, ಕಾಮರ್ಸ್ ಪಾಸ್ ಆದವರಿಗೆ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಕೆಗೆ ಏಳೇ ದಿನ ಬಾಕಿ ಪೂರ್ಣ ಮಾಹಿತಿಗಾಗಿ ಕ್ಲಿಕ್ಕಿಸಿ
2020-21ನೇ ಸಾಲಿಗೆ ₹50 ಲಕ್ಷ ಅನುದಾನವನ್ನು ಈ ಯೋಜನೆ ಅಡಿ ಒದಗಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಫೆಲೋಶಿಪ್, ಹಾಸ್ಟೆಲ್ ಮೆಸ್ ಬಿಲ್ ಮತ್ತು ಶುಲ್ಕ ಮರುಭರಿಕೆ ಸೌಲಭ್ಯಗಳನ್ನು ಒದಗಿಸಲು ಬಳಕೆ ಮಾಡಲಾಗಿದೆ.
ಹೆಚ್ಚುವರಿ ₹20 ಲಕ್ಷ ಅನುದಾನ
ಹೆಚ್ಚುವರಿ ₹20 ಲಕ್ಷ ಅನುದಾನವನ್ನು ಪುಸ್ತಕಗಳ ಖರೀದಿಗೆ ನೀಡಲಾಗಿದ್ದು, ವಿಶ್ವವಿದ್ಯಾಲಯದ ಗ್ರಂಥಾಲಯ, ಸಹ್ಯಾದ್ರಿ ಕಾಲೇಜು, ಕಡೂರು ಪಿ.ಜಿ.ಕೆಂದ್ರಗಳ ಗ್ರಂಥಾಲಯಗಳಿಗೆ ವಿಷಯವಾರು ಪುಸ್ತಕಗಳ ಖರೀದಿಸಿ ಒದಗಿಸಲಾಗಿದೆ.
ಕುವೆಂಪು ವಿಶ್ವವಿದ್ಯಾಲಯಕ್ಕೆ ನೀಡುತ್ತಿರುವ ಅನುದಾನ ಮೊತ್ತವನ್ನು ಸಂಪೂರ್ಣ ಬಳಕೆಮಾಡಿಕೊಂಡು ಪ್ರಮಾಣ ಪತ್ರವನ್ನು ಸರಿಯಾದ ಸಮಯಕ್ಕೆ ಇಲಾಖೆಗೆ ಸಲ್ಲಿಸುತ್ತಿರುವ ಹೆಗ್ಗಳಿಕೆಗೆ ವಿವಿ ಪಾತ್ರವಾಗಿದೆ ಎಂದರು.
ಕುಲಸಚಿವರಾದ ಜಿ.ಅನುರಾಧಾ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎಂ.ತ್ಯಾಗರಾಜ್, ಹಣಕಾಸು ಅಧಿಕಾರಿ ಎಸ್.ರಾಮಕೃಷ್ಣ, ಘಟಕದ ಸಂಚಾಲಕ ಡಾ.ಉದ್ದಗಟ್ಟಿ ವೆಂಕಟೇಶ್ ಉಪಸ್ಥಿತರಿದ್ದರು.
https://www.suddikanaja.com/2021/09/07/high-court-order-to-stop-encroachment-of-mc-gann-teaching-district-hospital/