ಸುದ್ದಿ ಕಣಜ.ಕಾಂ | TALUK | PROTEST
ಶಿರಾಳಕೊಪ್ಪ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ದೇಶದಾದ್ಯಂತ ರೈತ ಸಂಘಟನೆಗಳು ಕಿಸಾನ್ ಸ್ವರಾಜ್ಯ ಮಹಾಯಾತ್ರೆ ಹಮ್ಮಿಕೊಂಡಿವೆ.
ವಿಡಿಯೋ ರಿಪೋರ್ಟ್: ಕಸ್ತೂರಿರಂಗನ್ ವರದಿ ವಿರುದ್ಧ ಚಿಕ್ಕಮಗಳೂರಲ್ಲಿ ನಡೆದ ಪ್ರತಿಭಟನೆ ವೇಳೆ ನಡೀತು ಗಲಾಟೆ, ಕಾರಣವೇನು?
ಈ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್, ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ಯಾತ್ರೆ ಕರ್ನಾಟಕದಲ್ಲೂ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ರೈತ ಸಂಘಟನೆಗಳು ಸಿದ್ಧತೆ ನಡೆಸಿವೆ ಎಂದರು.
ಇಲ್ಲಿನ ಚೌಕಿಸಾಲು ಮಠದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಗಂಗಾಧರ್ ಮಾತನಾಡಿದರು.
ರೈತರ ಮೇಲೆ ಸರ್ಕಾರ ಗದಾಪ್ರಹಾರ
ಈಗಾಗಲೇ ಕಷ್ಟದಲ್ಲಿರುವ ರೈತರ ಮೇಲೆ ಸರ್ಕಾರ ನಿರಂತರ ಗದಾಪ್ರಹಾರ ಮಾಡುತ್ತಲೇ ಇದೆ. ಪೌತಿ ಮೇರೆಗೆ ಖಾತೆ ಬದಲಾವಣೆಗೆ ಪೋಡಿ ಶುಲ್ಕವನ್ನು ₹
15ರಿಂದ ₹55ರ ವರಗೆ ಹೆಚ್ಚಿಸಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖಾಲಿ ನಿವೇಶನ ಕಟ್ಟಡಗಳಿಗೆ ಕಂದಾಯ ಕೂಡ ಏರಿಕೆ ಮಾಡಿದೆ. ಸರ್ಕಾರ ಆದಾಯಕ್ಕಾಗಿ ಜನಸಾಮಾನ್ಯರು ಹಾಗೂ ಕೃಷಿಕರ ಮೇಲೆ ಹೊರ ಹೇರುತ್ತಿದೆ ಎಂದು ಆರೋಪಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣ ಬ್ಲೂ ಪ್ರಿಂಟ್ ಬಗ್ಗೆ ಅಪಸ್ವರ, ವಿನ್ಯಾಸ ಬದಲಿಸದಿದ್ದರೆ ಕೋರ್ಟ್ ಮೊರೆಯ ಎಚ್ಚರಿಕೆ
ಅಕ್ಟೋಬರ್ 2ರಂದು ಬೃಹತ್ ಜಾಥಾ
ರಾಷ್ಟ್ರೀಯ ಕಿಸಾನ್ ಮಹಾ ಮಂಚ್ ಸಂಯುಕ್ತ ಕಿಸಾನ್ ಸಭೆಯಲ್ಲಿ ಅಕ್ಟೋಬರ್ 2ರಂದು ಬೃಹತ್ ಜಾಥಾಕ್ಕೆ ನಿರ್ಧರಿಸಲಾಗಿದೆ. ಇದರಲ್ಲಿ ದೇಶದ ನಾನಾ ಕಡೆಗಳಿಂದ ಜನ ಆಗಮಿಸಲಿದ್ದಾರೆ ಎಂದರು.
ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಜಯಪ್ಪ ಗೌಡ, ಉಪಾಧ್ಯಕ್ಷ ಪುಟ್ಟನಗೌಡ, ಶಿವಪುತ್ರಪ್ಪ ಗೌಡ, ಶಿಕಾರಿಪುರ ತಾಲ್ಲೂಕು ಸಂಘ ಗೌರವ ಅಧ್ಯಕ್ಷ ಪ್ಯಾಟಿ ಈರಪ್ಪ, ಅಧ್ಯಕ್ಷ ಮುಳಕೊಪ್ಪ ರಾಜಣ್ಣ, ಭದ್ರಾವತಿ ಸಂಘದ ಅಧ್ಯಕ್ಷ ಯಶವಂತ ರಾವ್, ಪ್ರಧಾನ ಕಾರ್ಯದರ್ಶಿ ಗಿರೀಶ್, ವಿರೇಶ್, ಸಾಗರದ ಅಧ್ಯಕ್ಷ ಅರುಣ್, ಸೊರಬದ ಅಧ್ಯಕ್ಷ ವೇದಮೂರ್ತಿ, ನವೀದ್ ಉಪಸ್ಥಿತರಿದ್ದರು.