ಸುದ್ದಿ ಕಣಜ.ಕಾಂ | CITY | ROUTE CHANGE
ಶಿವಮೊಗ್ಗ: ವಿನೋಬನಗರದ ಆರನೇ ತಿರುವು 30 ಅಡಿ ರಸ್ತೆಯಾಗಿದ್ದು, ಸದರಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರದಿಂದ ಅಲ್ಲಿನ ನಿವಾಸಿಗಳಿಗೆ ವಾಯುಮಾಲಿನ್ಯ, ಶಬ್ಧಮಾಲಿನ್ಯ ಹಾಗೂ ಅಪಘಾತಗಳಾಗುವ ಸಂಭವ ಇರುವುದರಿಂದ ಭಾರೀ ವಾಹನಗಳ ಚಾಲಕರು ತಮ್ಮ ವಾಹನಗಳನ್ನು ಈ ಮಾರ್ಗದ ಬದಲಾಗಿ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರ್ಯಾಯ ಮಾರ್ಗ
ವಿನೋಬನಗರದ ಮೊದಲನೇ ಹಂತದ 6ನೇ ತಿರುವಿನಲ್ಲಿ ಸಂಚರಿಸುವ ಭಾರೀ ವಾಹನಗಳು ಈ ಮಾರ್ಗದ ಬದಲಾಗಿ ಕೆ.ಇ.ಬಿ. ಸಮೀಪವಿರುವ 60 ಅಡಿ ರಸ್ತೆಯ ಮುಖಾಂತರ ಹಾಗೂ ಲಕ್ಷ್ಮೀ ಚಿತ್ರಮಂದಿರದ ಸಮೀಪದಲ್ಲಿ ಇರುವ ತುಂಗಾ ಚಾನಲ್ ಹಿಂಭಾಗದ ರಸ್ತೆಯ ಮುಖಾಂತರ ಸಂಚರಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.