ಸುದ್ದಿ ಕಣಜ.ಕಾಂ | TALUK | CRIME
ಭದ್ರಾವತಿ: ತಾಲೂಕಿನ ಹುಣಸೇಕಟ್ಟೆ ಗ್ರಾಮದ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ಸಂಖ್ಯೆ 42ರ ಎಂಪಿಎಂ ಅರಣ್ಯದಲ್ಲಿ ಜೀವಂತವಾಗಿ ನಾಯಿಗಳನ್ನು ಸಮಾಧಿ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ಆನ್ಲೈನ್ನಲ್ಲಿ ಗೋಣಿ ಚೀಲ ಖರೀದಿಸಲು ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಶಿಕ್ಷಕ
ಸಮಾಧಿ ಮಾಡಲಾಗಿರುವ ಜಾಗವನ್ನು ಅಗೆದು ನೋಡಲಾಗಿ 30-40 ನಾಯಿಗಳ ಶವಗಳು ಸಿಕ್ಕಿದ್ದು, ಅದರ ಪಕ್ಕದ ಗುಂಡಿಯಲ್ಲೂ ನಾಯಿಗಳ ಶವಗಳಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಏನಿದು ಘಟನೆ, ಬೆಳಕಿಗೆ ಬಂದಿದ್ದು ಹೇಗೆ?
ಹುಣಸೇಕಟ್ಟೆ ಗ್ರಾಮದ ಲಕ್ಷ್ಮಣ್ ಎಂಬುವವರು ಸೆಪ್ಟೆಂಬರ್ 6ರಂದು ಬೆಳಗ್ಗೆ ನಮ್ಮ ರೆಸ್ಕ್ಯೂ ಕ್ಲಬ್ ಗೆ ಕರೆ ಮಾಡಿ ಹುಣಸೇಕಟ್ಟೆ ಪಂಚಾಯಿತಿ ಅಧಿಕಾರಿಗಳು ಮತ್ತರು ಸದಸ್ಯರÀು ಸೇರಿಕೊಂಡು ಗ್ರಾಮದಲ್ಲಿ ಬೀದಿ ನಾಯಿಗಳನ್ನು ಹಿಡಿದು ಟಾಟಾ ಎಸಿ ವಾಹನದಲ್ಲಿ ತಂದು ಎಂಪಿಎಂ ಅರಣ್ಯದಲ್ಲಿ ಜೀವಂತ ಸಮಾಧಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಆಗ ಶ್ವಾನಗಳನ್ನು ಸಜೀವವಾಗಿರುವಾಗಲೇ ಸಮಾಧಿ ಮಾಡಿದ್ದಾರೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದಿದೆ.
15-20 ಅಡಿ ಅಗೆದಾಗ ಸತ್ಯಾಂಶ ಪತ್ತೆ
ಕ್ಲಬ್ ಕಾರ್ಯದರ್ಶಿ ಕಾರ್ತಿಕ್ ಗೌಡ, ಸದಸ್ಯರಾದ ಸಂಜಯ್ ಪಾಟೀಲ್, ಸಂಜಯ್ ಜೀ ಅವರೊಂದಿಗೆ ನಾಯಿಗಳನ್ನು ಹೂತು ಹಾಕಿರುವ ಜಾಗಕ್ಕೆ ಭೇಟಿ ನೀಡಿದ್ದಾರೆ. ಪರಿಶೀಲನೆ ನಡೆಸಿದ್ದ ಜೆಸಿಬಿ ಯಂತ್ರದ ಮೂಲಕ 15-20 ಅಡಿ ಆಳ ಗುಂಡಿ ಅಗೆದಿದ್ದು ಆಗ ನಾಯಿಗಳನ್ನು ಹೂತು ಹಾಕಿರುವುದು ಗಮನಕ್ಕೆ ಬಂದಿದೆ.
ಆನ್ಲೈನ್ನಲ್ಲಿ ಗೋಣಿ ಚೀಲ ಖರೀದಿಸಲು ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಶಿಕ್ಷಕ
ಅಗೆದಾಗ ಸತ್ತಿರುವ ಒಂದು ನಾಯಿ ಸಿಕ್ಕಿದೆ.
ಈ ಬಗ್ಗೆ ವಿಚಾರಿಸಿದಾಗ ಸೆ.3 ಮತ್ತು 4ರಂದು ಗ್ರಾಮ ಪಂಚಾಯಿತಿ ನಾಯಿಗಳನ್ನು ಸಾಮೂಹಿಕವಾಗಿ ಹಿಡಿಯುವುದನ್ನು ಹುಣಸೇಕಟ್ಟೆ ಗ್ರಾಮದ ನಿವಾಸಿಗಳಾದ ಲಕ್ಷ್ಮಣ್, ಪ್ರಮೋದ್, ಮಂಜನಾಯ್ಕ್, ಎಚ್.ಎನ್.ಕುಮಾರ್, ನಿತಿನ್ ಕುಮಾರ್ ಸೇರಿದಂತೆ ಇತರರು ವೀಕ್ಷಿಸಿದ್ದಾರೆ. ಜತೆಗೆ, ನಾಯಿಗಳ ಚೀರಾಟವು ಕೇಳಿಬರುತಿತ್ತು ಎಂದು ಪೊಲೀಸ್ ಠಾಣೆಗೆ ನೀಡಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ.
30-40 ನಾಯಿಯ ಶವ ಪತ್ತೆ
ಸೆ.7ರಂದು ಮಧ್ಯಾಹ್ನ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮತ್ತೊಮ್ಮೆ ಗ್ರಾಮಸ್ಥರು ನಾಯಿ ಹೂತು ಹಾಕಿರುವಾಗ ಜಾಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಆಗ ಪ್ರಮೋದ್ ಕುಮಾರ್ ಮತ್ತು ಮಿಥುನ್ ಕುಮಾರ್ ಸಹಾಯದಿಂದ ಗುದ್ದಲಿ, ಸಲಿಕೆಗಳಿಂದ ಗುಡಿಯನ್ನು ಅಗೆಯಲಾಗಿದೆ. ಆಗ ಸುಮಾರು 30-40 ನಾಯಿಗಳ ಶವಗಳು ಪತ್ತೆಯಾಗಿವೆ. ಮತ್ತೊಂದು ಗುಂಡಿಯಲ್ಲಿ ಇನ್ನಷ್ಟು ನಾಯಿಯ ಶವಗಳು ಇರುವುದಾಗಿ ಹೇಳಲಾಗಿದೆ.
ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಎನಿಮಲ್ ರೆಸ್ಕ್ಯೂ ಕ್ಲಬ್ ನ ಜಿ.ಎಸ್.ಬಸವಪ್ರಸಾದ್ ಅವರು ದೂರು ನೀಡಿದ್ದು, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ (ಪಿಸಿಎ) 1960 ಪ್ರಕಾರ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.
ಸುದ್ದಿ ಕಣಜ ಇಂಪ್ಯಾಕ್ಟ್ | ಗುಂಡಿ ಮುಚ್ಚಲು ಮುಂದಾದ ಪಾಲಿಕೆ, ಎಲ್ಲೆಲ್ಲಿ ನಡೀತಿದೆ ಕಾಮಗಾರಿ