ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಟಿಪ್ಪು ನಗರದಲ್ಲಿ ಕಾರು ಕಳ್ಳತನ ಮಾಡಿ ಅದರಲ್ಲೇ ಕಳ್ಳತನ ಮಾಡಲು ಯತ್ನಿಸಿ, ತರಾತುರಿಯಲ್ಲಿ ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆಯಲಾಗಿದೆ. ಜನರು ಪ್ರಶ್ನಿಸಿದ್ದಕ್ಕೆ ಅವರಿಗೆ ಮಚ್ಚು ತೋರಿಸಿ ಹೆದರಿಸಲಾಗಿದೆ. ಇದರಿಂದ ರೊಚ್ಚಿಗೆದ್ದ ಜನ ದುಷ್ಕರ್ಮಿಗಳಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದೆಲ್ಲ ಬುಧವಾರ ಬೆಳಗ್ಗೆ ರವೀಂದ್ರ ನಗರದ ಗಣಪತಿ ದೇವಸ್ಥಾನ ಸಮೀಪ ನಡೆದಿದೆ. ಮೂವರನ್ನು ಬಂಧಿಸಿದ್ದು ಒಬ್ಬ ಪರಾರಿಯಾಗಿದ್ದಾನೆ.
https://www.suddikanaja.com/2021/08/04/tokyo-olympics-review/
ಯಾರ್ಯಾರು ಬಂಧಿತರು?
ಟಿಪ್ಪುನಗರ ಎಡ ಭಾಗದ ಏಳನೇ ಕ್ರಾಸ್ ನಿವಾಸಿ ಶಂಷೀರ್ (25), ಗೋಪಾಳದ ಸೈಯದ್ ಅಹಮದ್ (19), ಗೋಪಾಳದ ಶಫೀವುಲ್ಲಾ (18) ಬಂಧಿತರು. ಟಿಪ್ಪುನಗರದ ತಬರಕ್ ಪರಾರಿಯಾಗಿದ್ದು, ಹುಡುಕಾಟ ನಡೆದಿದೆ.
ಪಂಕ್ಚರ್ ಆದ ಕಾರು, ಸಿಕ್ಕಿಬಿದ್ದ ಖದೀಮರು
ವೃದ್ಧನಿಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದು, ಕಾರು ಪಂಕ್ಚರ್ ಆಗಿದೆ. ಆಗ ಜನರು ಜಮಾಯಿಸಿದ್ದಾರೆ. ಆಗ ಖದೀಮರು ಮಾರಕಾಸ್ತ್ರಗಳನ್ನು ತೋರಿಸಿ ಓಡಿಹೋಗಲು ಯತ್ನಿಸಿದ್ದಾರೆ. ಆಗ ಜನರು ಅವರನ್ನು ಹಿಡಿದು ಹಿಗ್ಗಾ- ಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ಗೊತ್ತಾಯ್ತು
ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಕಾರು ಕಳ್ಳತನದ್ದು ಎಂಬ ವಿಷಯ ಬೆಳಕಿಗೆ ಬಂದಿದೆ. ಅದನ್ನು ಟಿಪ್ಪುನಗರದಲ್ಲಿ ಕಳ್ಳತನ ಮಾಡಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
https://www.suddikanaja.com/2021/04/08/person-arrested-in-ganja-case/