ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ಪ್ರವಾಸಕ್ಕೆಂದು ಬಂದವರು ಪಟ್ಟಣದ ಲಾಡ್ಸ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಸಂಭವಿಸಿದೆ.
ಮೃತರನ್ನು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬನಹಟ್ಟಿ ಗ್ರಾಮದ ಸಂತೋಷ್(23), ಹನುಮಂತ್(28) ಲಾಡ್ಜ್ ನಲ್ಲಿದದ್ದ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶನಿವಾರ ಮಧ್ಯಾಹ್ನದ ಬಳಿಕ ರೂಂ ಸೇರಿದರು
ಸೆಪ್ಟೆಂಬರ್ 24ರಂದು ತಡರಾತ್ರಿ ಲಾಡ್ಜ್ ನಲ್ಲಿ ರೂಂ ಪಡೆದಿದ್ದ ಯುವಕರು ಸಂಬಂಧಿಕರಾಗಿದ್ದು, ಶನಿವಾರ ಮಧ್ಯಾಹ್ನ ಊಟ ಪಾರ್ಸಲ್ ತೆಗೆದುಕೊಂಡು ರೂಮಿಗೆ ಹೋಗಿದ್ದಾರೆ. ಅದಾದ ಬಳಿಕ ಭಾನುವಾರ ಬೆಳಗ್ಗೆ ಕೋಣೆ ಸ್ವಚ್ಚಗೊಳಿಸುವುದಕ್ಕಾಗಿ ಬಾಗಿಲು ತಟ್ಟಿದರೂ ತೆರೆದಿಲ್ಲ. ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಂದು ಪರಿಶೀಲಿಸಲಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಸಾಗರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.