ಸುದ್ದಿ ಕಣಜ.ಕಾಂ | TALUK | POLITICS
ಸಾಗರ: ತಾಲೂಕಿನ ಯಡೇಹಳ್ಳಿ ಗ್ರಾಮ ಪಂಚಾಯಿತಿ ಸರಗುಂದ ಗ್ರಾಮದ ಬಾಲಕನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಮೂಲಕ ಶಾಸಕ ಹಾಲಪ್ಪ ಮಾದರಿಯಾಗಿದ್ದಾರೆ.
ಗ್ರಾಮದ ಸ್ಕಂದನ ಬೋಜಪ್ಪ ಎಂಬ ಬಾಲಕನಿಗೆ ಕೆಲ ತಿಂಗಳ ಹಿಂದೆ ಹಾವು ಕಡಿದು ಕಾಲು ಕೊಳೆಯುತ್ತಿರುವ ಸ್ಥಿತಿಯಲ್ಲಿದ್ದು, ಸೂಕ್ತ ಚಿಕಿತ್ಸೆಗೆ ಹಣವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದಾನೆ. ಈ ವಿಷಯ ತಿಳಿದು ಹಾಲಪ್ಪ ಅವರು ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ವೈಯಕ್ತಿಕ ಧನ ಸಹಾಯ ನೀಡಿದ್ದಾರೆ. ಜೊತೆಗೆ, ಹೆಚ್ಚಿನ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದರು.
ಕುಟುಂಬಸ್ಥರಿಗೆ ನೀಡಿದ ಭರವಸೆಯಂತೆ ಶುಕ್ರವಾರ ಸ್ಕಂದನ್ ಮನೆಗೆ ಆಂಬುಲೆನ್ಸ್ ಕಳುಹಿಸಿ, ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅವಶ್ಯವಿದಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿ ಕೊಡುವ ಭರವಸೆ ನೀಡಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
https://www.suddikanaja.com/2021/07/18/shivamogga-airport-development/