ಸುದ್ದಿ ಕಣಜ.ಕಾಂ | DISTRICT | SPECIAL REPORT
ಶಿವಮೊಗ್ಗ: ‘ಗಾಂಧೀಜಿ’ ಹೆಸರಿನಲ್ಲೇ ಒಂದು ಶಕ್ತಿ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬಾಪೂಜಿ ಬ್ರಿಟಿಷರ ವಿರುದ್ಧ ರೂಪಿಸಿದ ಹೋರಾಟ, ನಡೆಸಿದ ಚಳವಳಿಗಳು ಹೆಗ್ಗುರುತಾಗಿ ಮೂಡಿವೆ. ಭಾರತದ ಇತಿಹಾಸದಲ್ಲಿ ಗಾಂಧೀಜಿ `ಮಹಾತ್ಮ’ರಾಗಿ ಚಿರಸ್ಥಾಯಿಯಾಗಿದ್ದಾರೆ.
ಇಂತಹದ್ದೇ ಒಂದು ಹೆಜ್ಜೆ ಗುರುತು ಹುಡುಕುತ್ತಾ ಹೋದಲ್ಲಿ ಅದು ಶಿವಮೊಗ್ಗಕ್ಕೂ ಸಂಪರ್ಕ ಕಲ್ಪಿಸುತ್ತದೆ. ಮಲೆನಾಡಿನ ಹೆಬ್ಬಾಗಿಲಿಗೂ ಬಂದಿದ್ದ ಬಾಪೂಜಿ ನಡೆದಾಡಿದ ಜಾಗಗಳಲ್ಲಿ ಈಗಲೂ ನೆನಪುಗಳು ಹಸಿರಾಗಿಯೇ ಉಳಿದಿವೆ.
ಶಿವಮೊಗ್ಗದವರ ನಾಲಗೆ ತುದಿಯಲ್ಲಿದ್ದಾರೆ ‘ಮಹಾತ್ಮ’
ಗಾಂಧೀಜಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ ಸವಿ ನೆನಪಿಗಾಗಿ ನಗರದ ಹೃದಯ ಭಾಗದಲ್ಲಿರುವ ಪ್ರಮುಖ ವ್ಯಾಪಾರ ಕೇಂದ್ರಕ್ಕೆ `ಗಾಂಧಿ ಬಜಾರ್’ ಎಂಬ ಹೆಸರಿಡಲಾಗಿದೆ. ಜೊತೆಗೆ, ಅವರು ಬಂದು ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಸ್ಥಳವನ್ನು ‘ಗಾಂಧಿ ಪಾರ್ಕ್’ ಎಂಬ ಹೆಸರಿಡಲಾಗಿದೆ. ಹೀಗೆ, ನಗರದ ಪ್ರಮುಖ ಎರಡು ಜಾಗಗಳು ಸದಾ ಗಾಂಧೀಜಿ ಅವರ ಹೆಸರು ಶಿವಮೊಗ್ಗದವರ ನಾಲಗೆ ತುದಿಯಲ್ಲಿರುವಂತೆ ಮಾಡಿವೆ.
ಗಾಂಧೀಜಿ-ಕಸ್ತೂರಬಾ ಅವರು ನೆಟ್ಟಿದ್ದ ಕಲ್ಪತರು
ಮಹಾತ್ಮ ಗಾಂಧೀಜಿ ಹಾಗೂ ಅವರ ಪತ್ನಿ ಕಸ್ತೂರಬಾ ಅವರು ನೆಟ್ಟಿರುವ ತೆಂಗಿನ ಮರಗಳು ಈಗ ಹುಲುಸಾಗಿ ಬೆಳೆದು ನಿಂತಿವೆ. ಬಾಲರಾಜ್ ಅರಸ್ ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿಯ ಎದುರು ಎರಡು ತೆಂಗಿನ ಮರಗಳು ಈಗಲೂ ಗಾಂಧೀಜಿ ಅವರ ನನಪನ್ನು ಮರಳಿ ಮರಳಿ ಸ್ಮøತಿಪಟದಲ್ಲಿ ಹಸುರಾಗಿ ಇಟ್ಟಿವೆ.
ಗಾಂಧೀಜಿ ಅವರು ಆಗ ಸಾಗರ, ಆನಂದಪುರಂ, ಸಾಗರ, ತೀರ್ಥಹಳ್ಳಿ, ನಗರ ಹೀಗೆ ಹಲವೆಡೆ ಭೇಟಿ ನೀಡಿದ್ದರು. ವಾಪಸ್ ತೆರಳುವಾಗ ಗಾಂಧಿ ದಂಪತಿ ವೆಂಕಟಸುಬ್ಬಶಾಸ್ತ್ರೀ ಅವರ ಮನೆಗೆ ಭೇಟಿ ನೀಡಿ ಉಪಚಾರ ಸ್ವೀಕರಿಸಿದ್ದರು. ಆ ವೇಳೆ, ಶಾಸ್ತ್ರೀ ಅವರ ತಾಯಿ ಶೇಷಮ್ಮ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಚಿನ್ನದ ಸರವನ್ನೇ ನೀಡಿದ್ದರು.
https://www.suddikanaja.com/2020/11/03/pm-best-memory/