ಸುದ್ದಿ ಕಣಜ.ಕಾಂ | KARNATAKA | ENTERTAINMENT
ಶಿವಮೊಗ್ಗ: ಕೋವಿಡ್ ಹಿನ್ನೆಲೆ ವಿಳಂಬವಾದರೂ ಈಗ ‘ಅದೊಂದಿತ್ತು ಕಾಲ’ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ.
ಕೀರ್ತಿ ನಿರ್ದೇಶಿಸಿರುವ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ನಾಯಕನ ಪಾತ್ರದಲ್ಲಿದ್ದಾರೆ. ಆದಿತಿ ಪ್ರಭುದೇವ್ ಮತ್ತು ಗಟ್ಟಿಮೇಳ ಧಾರವಾಹಿ ಖ್ಯಾತಿಯ ಅಮೂಲ್ಯ (ನಿಶಾ) ಅವರು ನಟಿಸುತಿದ್ದಾರೆ. ಚಿತ್ರದ ಮೂರನೇ ಹಂತದ ಶೂಟಿಂಗ್ ಪೂರ್ಣಗೊಂಡಿದ್ದು, ಮಲೆನಾಡಿನ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ಚಿತ್ರ ತಂಡಕ್ಕೆ ಭೇಟಿ ಮಾಡಿರುವ ಕ್ಯಾಸ್ಟಿಂಗ್ ಡೈರೆಕ್ಟರ್ ಸಂದೀಪ್ ಅವರು ಚಿತ್ರ ತಂಡದ ನಿರ್ದೇಶಕ, ನಟ, ನಟಿಯರಿಗೆ ಭೇಟಿ ನೀಡಿ ಶಿವಮೊಗ್ಗ ಟೀಂನಿಂದ ಸನ್ಮಾನಿಸಲಾಗಿದೆ.