ಸುದ್ದಿ ಕಣಜ.ಕಾಂ | TALUK | CRIME NEWS
ಹೊಸನಗರ: ತಾಲೂಕಿನ ರಿಪ್ಪನ್ ಪೇಟೆಯ ಅರಸಾಳು ಬಳಿ ಮೈಲಿಕಲ್ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಲಾರಿ ಚಾಲಕ ಮೃತಪಟ್ಟಿದ್ದಾನೆ.
ಹೊಸನಗರದ ಫೈಜಲ್ (27) ಮೃತಪಟ್ಟಿರುವ ವ್ಯಕ್ತಿ. ಹೊಸನಗರದಿಂದ ಮರಳು ತುಂಬಿಕೊಂಡು ಶಿವಮೊಗ್ಗ ಕಡೆಗೆ ಬರುತಿದ್ದಾಗ ನಿಯಂತ್ರಣ ತಪ್ಪಿ ಲಾರಿಯು ಮರಕ್ಕೆ ಹೊಡೆದಿದ್ದು ಆತ ಮೃತಪಟ್ಟಿದ್ದಾನೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.