ಸುದ್ದಿ ಕಣಜ.ಕಾಂ | KARNATAKA | CRIME NEWS
ಶಿವಮೊಗ್ಗ: ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಬಂದಿದ್ದ ಜೀವ ಬೆದರಿಕೆ ಕರೆಯೊಂದರ ಜಾಡು ಹಿಡಿದು ತನಿಖೆ ನಡೆಸಿದ ಶಿವಮೊಗ್ಗ ಪೊಲೀಸರಿಗೆ ಭಟ್ಕಳದ ಸಂಪರ್ಕ ಸಿಕ್ಕಿದೆ.
ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದ ಶಂಕಿತ ಉಗ್ರ ಸದ್ದಾಂ ಹುಸೇನ್ ಅವರ ಪತ್ನಿ ಭಟ್ಕಳದ ಸಾಯಿರಾ ಬಾನು (27) ಎಂಬಾಕೆಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
READ | ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ
ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಹೆಬ್ಬೆಟ್ ಮಂಜನ ಹೆಸರಿನಲ್ಲಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು. ಇದರಿಂದ ಭಯ ಪಟ್ಟು ಅವರು ಹಣವನ್ನು ಖಾತೆಗೆ ಹಾಕಿದ್ದರು. ತದನಂತರ, ಶಿವಮೊಗ್ಗದ ಸಿ.ಇ.ಎನ್. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರ ಜಾಡು ಹಿಡಿದು ಹೋದಾಗ ಭಟ್ಕಳದ ಸಾಯಿರಾ ಅವರ ಖಾತೆಗೆ ಹಣ ಜಮಾ ಮಾಡಿರುವುದು ಖಚಿತವಾಗಿದೆ. ಬಳಿಕ ಅವರನ್ನು ಬಂಧಿಸಲಾಗಿದೆ.
ಶಂಕಿತ ಉಗ್ರನೊಬ್ಬನ ಪತ್ನಿಯ ಖಾತೆಗೆ ಹಣ ಪಾವತಿಸುವುದಕ್ಕಾಗಿ ಬೆದರಿಕೆ ಕರೆ ಬಂದಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತಿದ್ದಾರೆ.
ಕೋರ್ಟಿಗೆ ಗೈರಾದ 15 ಜನ ಅರೆಸ್ಟ್, ಆರೋಪಿಗಳ ಮೇಲಿರುವ ಕೇಸ್ ಗಳೇನು ಗೊತ್ತಾ?