ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಅಂಗಡಿಯೊಂದರಲ್ಲಿ ಸಿಗರೇಟ್ ಸೇದಿ ಹಣ ಕೇಳಿದ್ದಕ್ಕೆ ದಾಂಧಲೆ ಮಾಡಿದ್ದಲ್ಲದೇ ಅಂಗಡಿ ಮಾಲೀಕನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾದ ರೌಡಿಶೀಟರ್ ವೊಬ್ಬರ ವಿರುದ್ಧ ತುಂಗಾನಗರ ಪೊಲೀಸರು ಸುಮೋಟೊ ಕೇಸ್ ದಾಖಲಿಸಿದ್ದಾರೆ.
ಪ್ರಕರಣವೊಂದರ ಮೇಲೆ ಬೇಲ್ ಮೇಲೆ ಹೊರಗಡೆ ಬಂದಿರುವ ರೌಡಿಶೀಟರ್ ಸಲ್ಮಾನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಟಿಪ್ಪುನಗರದ ನೇತಾಜಿ ವೃತ್ತ ಸಮೀಪದ ಅಂಗಡಿಯೊಂದರಲ್ಲಿ ಶುಕ್ರವಾರ ಸಲ್ಮಾನ್ ಹಾಗೂ ಆತನ ಸಹಚರರು ಸಿಗರೇಟ್ ಸೇದಿದ್ದಾರೆ. ಆದರೆ, ಮಹಿಳೆಗೆ ಈತನ ಬಗ್ಗೆ ಮಾಹಿತಿ ಇಲ್ಲದ್ದಕ್ಕೆ ಸಿಗರೇಟ್ ಹಣ ನೀಡುವಂತೆ ಕೇಳಿದ್ದಾಳೆ. ಆಗ ತನಗೆ ಹಣ ಕೇಳುತ್ತಿಯಾ ಎಂದು ಅಂಗಡಿಯ ಗಾಜುಗಳನ್ನು ಜಖಂಗೊಳಿಸಿದ್ದಾನೆ. ಅಲ್ಲದೇ ಮಹಿಳೆಗೆ ಜಿವ ಬೆದರಿಕೆಯನ್ನೂ ಹಾಕಲಾಗಿದೆ ಎನ್ನಲಾಗಿದೆ.
ಪೊಲೀಸರಿಗೆ ನಡೆದ ಜಗಳದ ಕುರಿತು ಮಾಹಿತಿ ಲಭಿಸಿದ ನಂತರ ಅವರು ಅಲ್ಲಿಗೆ ಭೇಟಿ ನೀಡಿದ್ದಾರೆ. ಸಿಸಿ ಕ್ಯಾಮೆರಾದಲ್ಲಿನ ದೃಶ್ಯಗಳನ್ನು ವೀಕ್ಷಿಸಿದ್ದಾರೆ. ದೂರು ದಾಖಲಿಸುವಂತೆ ಅಂಗಡಿ ಮಾಲೀಕರಿಗೆ ಸೂಚಿಸಿ ಹೋಗಿದ್ದಾರೆ. ಆದರೆ, ಭಯದಿಂದಾಗಿ ಆಕೆ ಬಂದಿಲ್ಲ. ಈ ಕಾರಣದಿಂದಾಗಿ ತುಂಗಾನಗರ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.
https://www.suddikanaja.com/2021/01/28/four-person-arrested-in-shivamogga/