ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದ ವಾದಿ ಎ ಹುದಾ ಬಡಾವಣೆಯಲ್ಲಿ ರೌಡಿಶೀಟರ್ ಒಬ್ಬನನ್ನು ಶುಕ್ರವಾರ ತಡರಾತ್ರಿ ಕೊಲೆ ಮಾಡಲಾಗಿದೆ. ಜನ ಭೀತಿಯಲ್ಲಿದ್ದಾರೆ.
ರೌಡಿಶೀಟರ್ ಮೊಹಮ್ಮದ್ ಜೈನಾದ್(22) ಎಂಬಾತನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ.
ಮೊಹಮ್ಮದ್ ಜೈನಾದ್ 2021ರ ಮಾರ್ಚ್ 12ರಂದು ಲಷ್ಕರ್ ಮೊಹಲ್ಲಾದಲ್ಲಿ ಮೊಹಮ್ಮದ್ ನಖಿ ಅಲಿ ಎಂಬಾತ ಕೆಳಗಿನ ತುಂಗಾನಗರದ ಮಸೀದಿ ಬಳಿ ಮಾತನಾಡುತ್ತ ನಿಂತುಕೊಂಡಿದ್ದಾಗ ಜೈನಾದ್ ಮತ್ತು ಸಹಚರರು ನಖಿ ಅಲಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಈ ಘಟನೆಯ ರಿವೆಂಜ್ ತೀರಿಸಿಕೊಳ್ಳುವುದಕ್ಕಾಗಿ ಜೈನಾದನ ಹುಡುಕಾಟ ನಡೆಸಲಾಗುತಿತ್ತು. ಅದೇ ಹೊತ್ತಿಗೆ ಶುಕ್ರವಾರ ರಾತ್ರಿ ವಾದಿ ಎ ಹುದಾ ಮೂರನೇ ತಿರುವಿನ ಸಮೀಪ ನಖಿ ಅಲಿ ಮತ್ತು ಜೈನಾದ್ ಮುಖಾಮುಖಿಯಾಗಿದ್ದಾರೆ. ಇಬ್ಬರ ನಡುವೆ ಗಲಾಟೆ ನಡೆದಿದೆ. ಆಗ ನಖಿ ಅಲಿ ಮತ್ತು ಆತನ ಸ್ನೇಹಿತ ಇಲಿಯಾಜ್ ನಗರದ ಅಬು (22) ಸೇರಿ ಮೊಹಮ್ಮದ್ ಜೈನಾದ್ ನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ.
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.