ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಗಂಗಾ ಸ್ನಾನ ವೇಳೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರು ಪಾಲಾದ ಘಟನೆ ಭಾನುವಾರ ನಡೆದಿದೆ.
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಕೂಡ್ಲಿ ಗ್ರಾಮದ ತುಂಗಭದ್ರಾ ನದಿ ಸಂಗಮ ಸ್ಥಾನದಲ್ಲಿ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಹರೀಶ್(24) ನಾಪತ್ತೆಯಾದ ಯುವಕ. ಪಿತೃಪಕ್ಷದಂದು ಫಣಿಯಾಚಾರ್ ಕುಟುಂಬದವರು ಪ್ರತಿ ವರ್ಷ ಕೂಡ್ಲಿ ಕ್ಷೇತ್ರದಲ್ಲಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ಈ ವರ್ಷವೂ ಆಗಮಿಸಿದ್ದು, ಸಹೋದರರಾದ ಯಶ್ವಂತ್ ಮತ್ತು ಹರೀಶ್ ಗಂಗಾ ಸ್ನಾನಕ್ಕೆಂದು ತುಂಗಭದ್ರ ನದಿಗೆ ಇಳಿದಿದ್ದಾರೆ. ನೀರಲ್ಲಿ ಮಿಂದೇಳುವಾಗ ನೀರಿನ ಸೆಳೆತಕ್ಕೆ ನೀರಲ್ಲಿ ತೇಲಿಕೊಂಡು ಹೋಗಿದ್ದಾರೆ. ಆಗ ಯಶ್ವಂತ್ ಮರದ ತುಂಡಿನ ಆಶ್ರಯ ಪಡೆದಿದ್ದಾರೆ. ಹೀಗಾಗಿ, ಅವರನ್ನು ರಕ್ಷಿಸಲಾಗಿದೆ. ಆದರೆ, ಹರೀಶ್ ನೀರಿನ ಸೆಳೆತಕ್ಕೆ ತೇಲಿಕೊಂಡು ಹೋಗಿದ್ದು ಪತ್ತೆಯಾಗಿಲ್ಲ.
ಅಗ್ನಿಶಾಮಕ ದಳ ಸಿಬ್ಬಂದಿ ಹರೀಶ್ ಹುಡುಕಾಟ ನಡೆಸಿದ್ದಾರೆ. ಆದರೆ, ಪತ್ತೆಯಾಗಿಲ್ಲ. ರಾತ್ರಿಯಾಗಿದ್ದರಿಂದ ಕಾರ್ಯಾಚರಣೆ ಅರ್ಧಕ್ಕೆ ಬಿಡಲಾಗಿದೆ. ಸೋಮವಾರ ಬೆಳಗ್ಗೆಯೂ ಹುಡುಕಾಟ ನಡೆಯುತ್ತಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.