ಸುದ್ದಿ ಕಣಜ.ಕಾಂ
ಹೊಸನಗರ: ಒಂದೆಡೆ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಆ ಮೂಲಕ ಕಾಡು ಪ್ರಾಣಿಗಳ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ. ಹೀಗಿರುವಾಗ, ಈ ಅವಧಿಯಲ್ಲಿಯೇ ಜಿಂಕೆಯೊಂದನ್ನು ಬೇಟೆ ಆಡಲಾಗಿದೆ.
ಬೇಟೆಯಾಡಿದ ಮೂವರ ಬಂಧನ
ತಾಲೂಕು ರಿಪ್ಪನ್ ಪೇಟೆಯ ಅರಸಾಳು ವಲಯ ವ್ಯಾಪ್ತಿಯ ಆಲವಳ್ಳಿ ಮನ್ನಾಜಂಗಲಿಯಲ್ಲಿ ಜಿಂಕೆ ಬೇಟೆಯಾಡಿದ ಮೂವರನ್ನು ಬಂಧಿಸಲಾಗಿದೆ.
ಸಾಗರ ತಾಲೂಕಿನ ಪ್ರಶಾಂತ್(38), ಸಚಿನ್(20), ಆದರ್ಶ(20) ಎಂಬುವವರನ್ನು ಬಂಧಿಸಲಾಗಿದೆ. ಇನ್ನೊಬ್ಬ ನಾಪತ್ತೆಯಾಗಿದ್ದು, ಆತನ ಹುಡುಕಾಟ ನಡೆದಿದೆ.
ಅರಸಾಳು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಟ್ನಲ್ಲಿ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಬಾಬು ರಾಜೇಂದ್ರ ಪ್ರಸಾದ್ ದಿಢೀರ್ ದಾಳಿ ನಡೆಸಿ ಆರೋಪಿಗಳನ್ನು ಜಿಂಕೆ ಸಹಿತ ವಶಕ್ಕೆ ಪಡೆದಿದ್ದಾರೆ.