ಸುದ್ದಿ ಕಣಜ.ಕಾಂ | CITY | TOURISM
ಶಿವಮೊಗ್ಗ: ನಗರದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಝೂ ಮತ್ತು ಸಫಾರಿ ವೀಕ್ಷಣೆಗೆ ಅಕ್ಟೋಬರ್ 19ರಂದು ಅವಕಾಶ ನೀಡಲಾಗಿದೆ.
ಮೃಗಾಲಯವು ಪ್ರತಿ ಮಂಗಳವಾರ ಬಂದ್ ಇರಲಿದೆ. ಆದರೆ, ಈ ಮಂಗಳ ಪ್ರವಾಸಿಗರ ಆಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.