ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಕೂಡ್ಲಿ ಗ್ರಾಮದ ತುಂಗಭದ್ರ ನದಿ ಸಂಗಮ ಸ್ಥಾನದಲ್ಲಿ ನಾಪತ್ತೆಯಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯ ಶವ ಮಂಗಳವಾರ ಸಿಕ್ಕಿದೆ.
ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಹರೀಶ್(24) ಎಂಬುವವರ ಶವ ಕಾರ್ಯಾಚರಣೆ ಬಳಿಕ ಹೊಳಲೂರು ಹೊಸ ಸೇತುವೆ ಬಳಿಯ ಮಡಕೆ ಚೀಲೂರು ಬಳಿ ಸಿಕ್ಕಿದೆ.
ನಿರಂತರ ಕಾರ್ಯಾಚರಣೆ ಬಳಿಕ ಸಿಕ್ಕಿದ ಶವ
ಭಾನುವಾರ ಪಿತೃಪಕ್ಷದಂದು ಫಣಿಯಾಚಾರ್ ಕುಟುಂಬದವರು ಪ್ರತಿ ವರ್ಷ ಕೂಡ್ಲಿ ಕ್ಷೇತ್ರದಲ್ಲಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲು ಆಗಮಿಸಿದ್ದರು. ಆಗ ಸಹೋದರರಾದ ಯಶ್ವಂತ್ ಮತ್ತು ಹರೀಶ್ ಗಂಗಾಸ್ನಾನಕ್ಕೆಂದು ತುಂಗಭದ್ರ ನದಿಗೆ ಇಳಿದಿದ್ದಾರೆ.
ನೀರಲ್ಲಿ ಮಿಂದೇಳುವಾಗ ನೀರಿನ ಸೆಳೆತಕ್ಕೆ ನೀರಲ್ಲಿ ತೇಲಿಕೊಂಡು ಹೋಗಿದ್ದಾರೆ. ಆಗ ಯಶ್ವಂತ್ ಮರದ ತುಂಡಿನ ಆಶ್ರಯ ಪಡೆದಿದ್ದಾರೆ. ಹೀಗಾಗಿ, ಅವರನ್ನು ರಕ್ಷಿಸಲಾಗಿತ್ತು. ಆದರೆ, ಹರೀಶ್ ನೀರಿನ ಸೆಳೆತಕ್ಕೆ ತೇಲಿಕೊಂಡು ಹೋಗಿದ್ದು ಪತ್ತೆಯಾಗಿರಲಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿಯ ನಿರಂತರ ಕಾರ್ಯಾಚರಣೆ ನಂತರ ಶವ ಸಿಕ್ಕಿದ್ದು, ಶವವನ್ನು ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಗೆ ಒಪ್ಪಿಸಲಾಗಿದೆ.
https://www.suddikanaja.com/2021/10/04/searching-for-student-kudli/