ಸುದ್ದಿ ಕಣಜ.ಕಾಂ | KARNATAKA | PADA KANAJA
1837 ಇಸವಿಯಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಬಗ್ಗೆ ಒಂದು ಹೊಸ ಪದ್ಧತಿಯು ಜಾರಿಗೆ ಬಂತು. ಇದನ್ನು ವೈಜ್ಞಾನಿಕವಾಗಿ ವಿವರಿಸಿದವನು ಮನಶಾಸ್ತ್ರಜ್ಞ ಪೆಸಟ್ ಲಾಟ್ಸಿ. ಆದರೆ, ಅದನ್ನು ಶಿಕ್ಷಣ ಕ್ಷೇತ್ರದಲ್ಲಿ ಜಾರಿಗೆ ತಂದವನು ಜರ್ಮನಿಯ ಆಗಸ್ಟ್ ಪ್ರೊಬೆಲ್. ಈತನು ಒಬ್ಬ ದಾರ್ಶನಿಕ. ಅವನ ಜೀವನದಲ್ಲಿ ಅವನಿಗೆ ತಂದೆ ತಾಯಿಗಳ ಪ್ರೀತಿ, ವಿಶ್ವಾಸಗಳು ದೊರೆತಿರಲಿಲ್ಲ. ಆದರಿಂದ, ನೊಂದವನು ವಯಸ್ಸಿಗೆ ಬಂದಾಗ ಮಕ್ಕಳ ಸುಖ ಸಂತೋಷಕ್ಕೆ ತಂದೆ ತಾಯಿಗಳು ಬದುಕಬೇಕು ಎಂದು ಬೋಧಿಸಿದ್ದ.
ಅವನ ತತ್ವದಲ್ಲಿ ಶಾಲೆ ಎನ್ನುವುದು ಒಂದು ಹೂವಿನ ತೋಟ, ಅಲ್ಲಿರುವ ಮಕ್ಕಳೇ ಪುಷ್ಪಗಳು. ಉಪಾಧ್ಯಾಯರು ಹೂವಿನ ತೋಟಗಾರರು. ಮಕ್ಕಳ ಮನಸ್ಸು ಹೂವಿನಂತೆ ವಿಕಾಸವಾಗಿ ಸಮಾಜಕ್ಕೆ ಜೀವನ ಪರಿಮಳದ ಸೊಗಸನ್ನು ನೀಡಬೇಕೆಂಬುವುದು ಅವನ ಹೊಸ ಶಿಕ್ಷಣ ತತ್ವ. ಇದನ್ನು ಜರ್ಮನ ಭಾಷೆಯಲ್ಲಿ ಕಿಂಡರ್ ಗಾರ್ಟನ್ ಎಂದು ಕರೆದರು. ಅದೇ ಈ ವಿಧವಾದ ಪದ್ಧತಿಯ ಮೂಲ.
‘ಆಂಗನ್’ ಎಂದರೆ ಹಿಂದಿಯಲ್ಲಿ `ಅಂಗಳ’. ಇದು ಸಂಸ್ಕೃತದ `ಅಂಗಣ’ ಶಬ್ದದಿಂದ ಹಾಗೂ `ವಾಡಿ’ ಎನ್ನುವುದು ಸಂಸ್ಕೃತದ `ವಾಟಿ’ ಶಬ್ದದಿಂದ ಬಂದಿದೆ. ವಾಟಿ ಎಂದರೆ ಫಲಪುಷ್ಪಗಳ ತೋಟ. ಇವೆರಡು ಸೇರಿ `ಆಂಗನವಾಡಿ’ ಆದವು. ಈ ಶಬ್ದವನ್ನು ಹಿಂದಿ ಪ್ರದೇಶಗಳಲ್ಲಿಯೂ ಮಹಾರಾಷ್ಟ್ರದಲ್ಲಿಯೂ ಉಪಯೋಗಿಸುತ್ತಿದ್ದರು.
ಕರ್ನಾಟಕಕ್ಕೆ ಅಂಗನವಾಡಿ ಬಂದಿದ್ದೇ ವಿಚಿತ್ರ
ಕರ್ನಾಟಕಕ್ಕೆ ಈ ಹೆಸರು ಪ್ರವೇಶವಾಗಿದ್ದು ವಿಚಿತ್ರ ರೀತಿಯಲ್ಲಿ. 1974-75ರ ವೇಳೆಗೆ ಕೇಂದ್ರ ಸರ್ಕಾರವು `ಅಂಗನವಾಡಿ’ಗಳಿಗೆ ಅನುದಾನ ಕೊಡಲು ಮುಂದಾದಾಗ ಕರ್ನಾಟಕದಲ್ಲಿಯೂ ಈ ಹೆಸರು ಚಿರಪರಿಚತವಾಯಿತು. ಈಗ ಅದೇ ಪ್ರಮುಖವಾಗಿ ಬಿಟ್ಟಿದೆ.
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2021/07/02/sound-in-bangalore-people-panic/