ಸುದ್ದಿ ಕಣಜ.ಕಾಂ | DISTRICT | WILD LIFE
ಶಿವಮೊಗ್ಗ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೊನೆಯ ಸಲ ಸಕ್ರೆಬೈಲು ಆನೆಬಿಡಾರಕ್ಕೆ ಭೇಟಿ ನೀಡಿದ್ದು, ಆಗ ಅವರು ಮುದ್ದಿಸಿದ ಆನೆಯ ಮರಿಗೆ `ಪುನೀತ್’ ಎಂದು ನಾಮಕರಣ ಮಾಡಲಾಗಿದೆ.
ಅರಣ್ಯ ಇಲಾಖೆಯ ಡಾಕ್ಯುಮೆಂಟರಿಯೊಂದರ ಚಿತ್ರೀಕರಣಕ್ಕೆ ಎರಡು ತಿಂಗಳುಗಳ ಹಿಂದೆ ಪುನೀತ್ ಅವರು ಸಕ್ರೆಬೈಲು ಆನೆಬಿಡಾರಕ್ಕೆ ಬಂದಿದ್ದರು. ಶೂಟಿಂಗ್ ವೇಳೆ ಮರಿಯ ಮುಗ್ಧತೆ ಕಂಡು ಅದನ್ನು ಮುದ್ದಾಡಿಸಿದ್ದರು. ಅದಕ್ಕಾಗಿ ಆನೆಗೆ ಪುನೀತ್ ಹೆಸರು ಇಡಲಾಗಿದೆ.
ಚಿತ್ರನಟರ ಹೆಸರು ಇದೇ ಮೊದಲು
ಇದೇ ಮೊದಲು ಚಿತ್ರನಟರೊಬ್ಬರ ಹೆಸರನ್ನು ಅರಣ್ಯ ಇಲಾಖೆಯಿಂದ ಅಧಿಕೃತವಾಗಿ ಆನೆಗೆ ಇಡಲಾಗಿದ್ದು, ಪುನೀತ್ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ನಾಮಕರಣ ಮಾಡಲಾಗಿದೆ.
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2021/04/03/bhanumati-birth-to-baby/