ಸುದ್ದಿ ಕಣಜ.ಕಾಂ | DISTRICT | WILD LIFE
ಶಿವಮೊಗ್ಗ: ನಿತ್ಯ ಸಾವಿರಾರು ಪ್ರವಾಸಿರಿಗೆ ಮನೋರಂಜನೆ ನೀಡುವ ಸಕ್ರೆಬೈಲು ಬಿಡಾರದಲ್ಲಿ ಬುಧವಾರ ನೀರವ ಮೌನ ಆವರಿಸಿತ್ತು.
ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಮರಿಯಾನೆಯನ್ನು ತಾಯಿ ನೇತ್ರಾಳಿಂದ ದೂರ ಮಾಡಲಾಯಿತು. ಎಷ್ಟೇ ರಚ್ಚೆ ಹಿಡಿದರೂ ವೀನಿಂಗ್ ಕಾರ್ಯ ಮಾತ್ರ ಬಿಡಲಿಲ್ಲ. ಕಣ್ಣೀರು ಸುರಿಸುತ್ತ ಮರಿಯಾನೆ ತಾಯಿಯಿಂದ ದೂರವಾಯಿತು. ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ (VIDEO REPORT)
ನಿತ್ಯ ಬೆಳಗ್ಗೆ ತುಂಗೆಯ ಹಿನ್ನೀರಿನಲ್ಲಿ ಸ್ನಾನ ಮಾಡಿ ಆಹಾರ ಸೇವಿಸಿ, ಮಣ್ಣು ಮೈಮೇಲೆ ಸವರಿಕೊಳ್ಳುತ್ತಾ ತಾಯಿ ನೇತ್ರಾಳೊಂದಿಗೆ ಚಿನ್ನಾಟ ಆಡುವ ಮರಿಯಾನೆ `ಪುನೀತ್ ರಾಜಕುಮಾರ್’ಗೆ ತಾಯಿಯಿಂದ ಬೇರ್ಪಡಿಸಲಾಯಿತು.
ಎರಡು ವರ್ಷಗಳವರೆಗೆ ತಾಯಿಯ ಆಸರೆಯಲ್ಲಿದ್ದು, ಆಕೆಯ ಎದೆ ಹಾಲು ಸೇವಿಸುತ್ತಾ ಆನೆಬಿಡಾರದಲ್ಲಿದ್ದ ಮರಿಯಾನೆಯನ್ನು ತಾಯಿಯಿಂದ ಬೇರ್ಪಡಿಸಿ (ವೀನಿಂಗ್) ಸ್ವತಂತ್ರವಾಗಿ ಬದುಕುವ ಪಾಠ ಬೋಧಿಸಲಾಯಿತು. ಆದರೆ, ಏಕಾಏಕಿ `ನೇತ್ರಾ’ಳಿಂದ ದೂರ ಸರಿಯಲು ಮರಿಯಾನೆ ಒಪ್ಪಲಿಲ್ಲ.
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
ತಾಯಿ ಕ್ರಾಲ್ ನಲ್ಲಿ ಬಂಧಿ, ಮಗನಿಗೆ ಸ್ವತಂತ್ರ ಜೀವನದ ಪಾಠ
ಮರಿಯಾನೆ (ಪುನೀತ್ ರಾಜಕುಮಾರ್)ಯನ್ನು ಬಿಡಾರಕ್ಕೆ ಕರೆದುಕೊಂಡು ಹೋಗಬೇಕಾದ ಹಿನ್ನೆಲೆ ತಾಯಿ ಆನೆ ನೇತ್ರಾಳನ್ನು ಬಿಡಾರದ ಕ್ರಾಲ್ ನಲ್ಲಿ ಬಂಧಿಸಿಡಲಾಗಿತ್ತು. ಕಾಲುಗಳಿಗೆ ಸರಪಳಿ ಕಟ್ಟಿ ಬಿಡಾರದ ಆನೆಗಳಾದ ಸಾಗರ ಮತ್ತು ಆಲೆಯ ನೇತೃತ್ವದಲ್ಲಿ ಮರಿಯಾನೆಗೆ ಹಗ್ಗ ಕಟ್ಟಲಾಯಿತು. ಅಲ್ಲಿವರೆಗೆ ಯಾವುದೇ ಸರಪಳಿ, ಹಗ್ಗದ ಬಂಧನವಿಲ್ಲದ ಆನೆ ಹಗ್ಗ ಕಟ್ಟಿಸಿಕೊಳ್ಳಲು ಭಾರಿ ಕೊಸರಾಡಿತು. ಆದರೆ, ಮಾವುತ, ಕಾವಾಡಿಗಳು ಮರಿಗೆ ಹಗ್ಗ ಕಟ್ಟಿ ಅದನ್ನು ಬಿಡಾರಕ್ಕೆ ಕರೆದೊಯ್ದರು.
ಪುನೀತ್ ರಾಜಕುಮಾರ್ ಎಂದು ಹೆಸರು ಇಡಲಾಗಿರುವ ಮರಿಯಾನೆಯನ್ನು ತಾಯಿಯಿಂದ ಬೇರ್ಪಡಿಸಿದ್ದು, ಮಾವುತರು ಮತ್ತು ಕಾವಾಡಿಗಳು ಎರಡು ತಿಂಗಳು ಇದಕ್ಕೆ ತರಬೇತಿ ನೀಡುತ್ತಾರೆ. ಆಹಾರ ಅರಸುವುದು, ಸೇವಿಸುವುದು ಹಾಗೂ ತನ್ನನು ತಾ ರಕ್ಷಿಸಿಕೊಳ್ಳುವುದು ಹೀಗೆ ಎಲ್ಲ ತರಬೇತಿಯನ್ನು ಆನೆಗೆ ನೀಡಲಾಗುತ್ತದೆ. ಈ ವೇಳೆ, ಮರಿಯಾನೆಗೆ ಇಷ್ಟವಿರುವ ಖಾದ್ಯವನ್ನು ನೀಡಿ ತನ್ನತ್ತ ಸೆಳೆಯಲಾಗುತ್ತದೆ. ಜೊತೆಗೆ, ತಾಯಿ ಆನೆಗೂ ಆರೈಕೆ ಮಾಡಲಾಗುತ್ತದೆ.
ಸಕ್ರೆಬೈಲಿನಲ್ಲಿದ್ದ ರಾಜ್ಯದ ಹಿರಿಯ ಆನೆ ಗಂಗಾ ಸಾವು, ಗಂಡಾನೆಗಳನ್ನು ಕ್ಷಣಾರ್ಧದಲ್ಲಿ ಹಿಡಿಯುತಿದ್ದ ಹಿರಿಯಾನೆ