ಸುದ್ದಿ ಕಣಜ.ಕಾಂ | SHIVAMOGGA CITY | CRIME NEWS
ಶಿವಮೊಗ್ಗ: ಘನ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಭಜಿಸಿ ನೀಡುವಂತೆ ಹೇಳಿದ್ದಕ್ಕೆ ಪಾಲಿಕೆ ಘನತ್ಯಾಜ್ಯ ಸಂಗ್ರಹಕಾರನ ಮೇಲೆ ಗುಂಪಾಗಿ ಬಂದು ಹಲ್ಲೆ ಮಾಡಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ದೇವರಾಜ್ (33) ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ. ಈಗ. ಕಳೆದ 13 ವರ್ಷಗಳಿಂದ ಪಾಲಿಕೆಯಲ್ಲಿ ಘನತ್ಯಾಜ್ಯ ಸಂಗ್ರಹಣೆ ಕೆಲಸ ಮಾಡುತಿದ್ದು, ಎಂದಿನಂತೆ ಕಸ ಸಂಗ್ರಹಿಸಲು ಹೋದಾಗ ಘಟನೆ ನಡೆದಿದೆ.
READ | ನ್ಯಾಯಾಲಯದಿಂದ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಇಮ್ರಾನ್ ಮುಂಬೈನಲ್ಲಿ ಸೆರೆ, ಬಂಧಿಸಿದ್ದು ಹೇಗೆ ಗೊತ್ತಾ?
ಹಲ್ಲೆ ಮಾಡಿ ಪರಾರಿ, ದಾಖಲಾಯ್ತು ಕೇಸ್
ಟಿಪ್ಪುನಗರದ ಯೂಸೂಫ್, ಶಾರೂಖ್ ಸೇರಿ ಇನ್ನಿತರರು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಟಿಪ್ಪು ನಗರದ ಬಲಭಾಗದಲ್ಲಿರುವ ಗೌಸಿಯಾ ಸರ್ಕಲ್ ನಿಂದ ಮುಂದೆ ಬೆಳಗ್ಗೆ ಕಸ ಸಂಗ್ರಹಿಸುತ್ತಿದ್ದಾಗ ಮಹಿಳೆಯೊಬ್ಬರ ಕಸದ ಚೀಲ ತೆಗೆದುಕೊಂಡು ಬಂದಿದ್ದು, ಪಿರಿಯಾ ದಿಯು ಅವರಿಗೆ ಪಾಲಿಕೆ ಅವರು ನೀಡಿದ ಬಕೆಟ್ ನಲ್ಲಿ ಕಸ ಹಾಕಲು ತಿಳಿಸಲಾಗಿದೆ. ಆಗ, ಅಲ್ಲೇ ಇದ್ದ ಒಬ್ಬ ಹುಡುಗ ದೇವರಾಜ್ ಮೇಲೆ ಅವಾಚ್ಯವಾಗಿ ಬೈದು ಹೊಡೆಯಲು ಬಂದಾಗ ಅಲ್ಲೇ ಇದ್ದ ಎಂಟರಿಂದ ಹತ್ತು ಜನರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಅಲ್ಲಿಯೇ ಇದ್ದ ಒಬ್ಬನು ದೊಣ್ಣೆಯಿಂದ ಹೊಡೆದು ಗಾಯ ಪಡಿಸಿದ್ದಾನೆ.
READ | ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಮಾರುಕಟ್ಟೆಗೆ ಬರಲಿದೆ `ಅಡಿಕೆ ಸಿಪ್ಪೆ’ಯಿಂದ ತಯಾರಿಸಿದ ಶ್ಯಾಂಪೂ
ಕಸ ವಿಲೇವಾರಿ ವಾಹನದ ಚಾಲಕ ಮಂಜುನಾಥ್ ಎಂಬಾತ ಜಗಳ ಬಿಡಿಸಲು ಬಂದಾಗ ಅವನಿಗೂ ಹೊಡೆಯಲಾಗಿದೆ ಹಾಗೂ ಜೀವ ಬೆದರಿಕೆ ಹಾಕಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನೀಡಿರುವ ದೂರಿನನ್ವಯ, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 143, 504, 323, 324, 506 353,149 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
https://www.suddikanaja.com/2021/10/26/contaminated-water-supply-to-sharavathi-nagar-hosamane/