ಸುದ್ದಿ ಕಣಜ.ಕಾಂ | TALUK | STUDENT PROTEST
ಸಾಗರ: ತಾಲೂಕಿನ ಆನಂದಪುರಂ ಸಮೀಪದ ಯಡೆಹಳ್ಳಿ ಇಂದಿರಾ ಗಾಂಧಿ ವಸತಿ ಶಾಲೆಯ ಮಕ್ಕಳು ಬೆಳ್ಳಂಬೆಳಗ್ಗೆ ಪ್ರತಿಭಟನೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಶಾಲೆಯ ಪ್ರಾಚಾರ್ಯರು, ಅಡುಗೆಯವರು ಮತ್ತು ಶುಶ್ರೂಷಕಿ, ವಾರ್ಡನ್ ಅವರ ವರ್ತನೆ ವಿರುದ್ದ ಸಿಡಿದೆದ್ದ ವಿದ್ಯಾರ್ಥಿಗಳು ಅಮಾನತುಗೊಳಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ತೀವ್ರತೆಯಿಂದಾಗಿ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ.
ಪ್ರಾಚಾರ್ಯರ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳ ಪ್ರತಿಭಟನೆ ಹೇಗಿತ್ತು, ವೀಕ್ಷಿಸಲು ವಿಡಿಯೋ ವೀಕ್ಷಿಸಿ (VIDEO REPORT)
READ | ಸರ್ಕಾರಿ ಶಾಲೆ ಮಕ್ಕಳು, ಪೋಷಕರಿಂದ ನ್ಯೂ ಮಂಡ್ಲಿ ರಸ್ತೆ ದಿಢೀರ್ ಬಂದ್!
ವಸತಿ ಶಾಲೆಯಲ್ಲಿ 242 ವಿದ್ಯಾರ್ಥಿಗಳು
ರಾಜ್ಯ ಹಾಗೂ ಜಿಲ್ಲೆಯ ವಿವಿಧ ಭಾಗದವರು ಸೇರಿ ಒಟ್ಟು 242 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಪೈಕಿ 117 ವಿದ್ಯಾರ್ಥಿಗಳು, 125 ವಿದ್ಯಾರ್ಥಿನಿಯರಿದ್ದಾರೆ.
ವಿದ್ಯಾರ್ಥಿಗಳು ಆರೋಪಿಸುವಂತೆ ‘ಪ್ರಾಚಾರ್ಯರು ರಾತ್ರಿ ಕುಡಿದುಬಂದು ಥಳಿಸುತ್ತಾರೆ. ವಿದ್ಯಾರ್ಥಿಗಳ ಅನಾರೋಗ್ಯದಿಂದ ಇದ್ದರೂ ವಸತಿ ಶಾಲೆ ಶುಶ್ರೂಷಕಿ ಗಮನ ಹರಿಸುವುದಿಲ್ಲ. ತಾವೆ ತಂದಿರಿಸಿಕೊಂಡಿರುವ ಔಷಧಿಯನ್ನು ಕೊಟ್ಟು ಒತ್ತಾಯವಾಗಿ ಕುಡಿಯಿರಿ ಎಂದು ಒತ್ತಾಯ ಮಾಡಲಾಗುತ್ತದೆ. ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ. ಆಹಾರದಲ್ಲಿ ಹುಳುಗಳು ಇರುತ್ತವೆ. ಇದೆಲ್ಲವನ್ನು ವಿರೋಧಿಸಿ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾನಿರತ ಸ್ಥಳಕ್ಕೆ ಶಾಸಕ ಹಾಲಪ್ಪ ಭೇಟಿ
ಶಾಸಕ ಹಾಲಪ್ಪ ಭೇಟಿ ನೀಡಿ ಸಂಬಂಧಪಟ್ಟವರನ್ನು ಅಮಾನತು ಇಲ್ಲವೇ ವರ್ಗಾವಣೆ ಮಾಉವ ಭರವಸೆ ನೀಡಿದ್ದಾರೆ. ಆದರೆ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ವಿದ್ಯಾರ್ಥಿಗಳ ಜೊತೆ ಮೆರವಣಿಗೆ ನಡೆಸಿ ಯಡೇಹಳ್ಳಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಅಮಾನತುಗೊಳಿಸುವಂತೆ ಒತ್ತಾಯಿಸಿದರು.
ಅಹವಾಲು ಸ್ವೀಕರಿಸಿ ಪ್ರಾಚಾರ್ಯರ ಸಸ್ಪೆಂಡ್
ಸ್ಥಳಕ್ಕೆ ಭೇಟಿ ನೀಡಿದ ಉಪ ವಿಭಾಗ ಅಧಿಕಾರಿ ಡಾ. ಎಲ್.ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾಗರಾಜ್ ಅವರು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಅಹವಾಲು ಸ್ವೀಕರಿಸಿ, ಪ್ರಾಂಶುಪಾಲರನ್ನು ಅಮಾನತುಗೊಳಿಸಿದರು. ಜೊತೆಗೆ, ಆರೋಗ್ಯ ನಿರೀಕ್ಷಕಿ, ಅಡುಗೆಯವರ ವಿರುದ್ಧ ಕ್ರಮದ ಭರವಸೆ ನೀಡಿದರು.
https://www.suddikanaja.com/2021/08/31/woman-arrested-fo-allegedly-torturing-her-son/