ಸುದ್ದಿ ಕಣಜ.ಕಾಂ | DISTRICT | ART & CULTURE
ಶಿವಮೊಗ್ಗ: ನಟ ಪುನೀತ್ ರಾಜಕುಮಾರ್ ನಿಧನ ಹಿನ್ನೆಲೆ ಮುಂದೂಡಲಾಗಿದ್ದ ನಾಟಕವನ್ನು ನವೆಂಬರ್ 27 ರ ಸಂಜೆ 6.30 ಗಂಟೆಗೆ ಏರ್ಪಡಿಸಲಾಗಿದೆ ಎಂದು ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ತಿಳಿಸಿದ್ದಾರೆ.
READ | ಶಿವಮೊಗ್ಗ ಕ್ಕೆ ಆಗಮಿಸಿದ ನಟ ರಾಜ್ ಬಿ.ಶೆಟ್ಟಿ ‘ಗರುಡ ಗಮನ ವೃಷಭ ವಾಹನ’ ಬಗ್ಗೆ ಹೇಳಿದ್ದೇನು?
ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನವೆಂಬರ್ 27 ರ ಸಂಜೆ 6.30 ಕ್ಕೆ ಎಚ್.ಎಸ್.ದ್ಯಾಮೇಶ್ ರಚನೆಯ, ವೈ.ಡಿ.ಬದಾಮಿ ನಿರ್ದೇಶನದ ಮಂಜುಳಾ ಬದಾಮಿ ನಿರ್ದೇಶನದ ‘ವಸುಂಧರೆ’ ಹಾಗೂ ಮಧು ಮಳವಳ್ಳಿ ನಿರ್ದೇಶನದ ವನಿತ ರಾಜೇಶ್ ಅಭಿನಯದ ‘ಮಧುರ ಮಂಡೋದರಿ’ ಏಕವ್ಯಕ್ತಿ ನಾಟಕ ಪ್ರದರ್ಶನಗಳು ನಡೆಯಲಿವೆ.
ಶಿವಮೊಗ್ಗ ರಂಗಾಯಣವು 66 ನೇ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ‘ಕನ್ನಡಕ್ಕಾಗಿ ನಾವು’ ಏಕವ್ಯಕ್ತಿ ರಂಗೋತ್ಸವವನ್ನು ಅಕ್ಟೋಬರ್ 28 ಮತ್ತು 29 ರಂದು ನಗರದ ಅಶೋಕನಗರದಲ್ಲಿರುವ ಹೆಲಿಪ್ಯಾಡ್ ಹಿಂಭಾಗದಲ್ಲಿರುವ ಸುವರ್ಣ ಸಾಂಸ್ಕೃತಿಕ ಭವನ ಇಲ್ಲಿ ಆಯೋಜಿಸಿತ್ತು. ಅ.29 ರಂದು ಪ್ರದರ್ಶನಗೊಳ್ಳಬೇಕಿದ್ದ ಏಕವ್ಯಕ್ತಿ ನಾಟಕ ಪ್ರದರ್ಶನಗಳು ಚಲನಚಿತ್ರ ನಟ ಪುನೀತ್ ರಾಜ್ಕುಮಾರ್ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ಈ ಏಕವ್ಯಕ್ತಿ ನಾಟಕ ಪ್ರದರ್ಶನದಲ್ಲಿ ಯಾವುದೇ ಸಭಾ ಕಾರ್ಯಕ್ರಮಗಳು ಇರುವುದಿಲ್ಲ. ಟಿಕೆಟ್ ದರ ಎರಡು ನಾಟಕ ಸೇರಿ ₹ 30 ಮಾತ್ರ ಆಗಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ರಂಗಾಯಣದ ಆಡಳಿತಾಧಿಕಾರಿ ತಿಳಿಸಿದ್ದಾರೆ.