ಸುದ್ದಿ ಕಣಜ.ಕಾಂ | DISTRICT | TALENT JUNCTION
ಶಿವಮೊಗ್ಗ: ನಗರದಲ್ಲಿ ‘ಪ್ರೇಮ ಮಯ’ ಚಲನಚಿತ್ರ ಚಿತ್ರೀಕರಣಕ್ಕೆ ಮೇಯರ್ ಸುನೀತಾ ಅಣ್ಣಪ್ಪ ಸೋಮವಾರ ಚಾಲನೆ ನೀಡಿದರು.
ಶ್ರೀ ಸಿಂಗನಲ್ಲೂರು ಚೌಡೇಶ್ವರಿ ಕಂಬೈನ್ಸ್ ಅವರ ‘ಪ್ರೇಮ ಮಯ’ ಕನ್ನಡ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಶಿವಮೊಗ್ಗದ ಪ್ರಸಿದ್ಧ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.
ನಿರ್ಮಾಪಕ ಎಲ್. ನಾಗಭೂಷಣ್, ನಿರ್ದೇಶಕ ರಘು ವರ್ಮಾ, ಛಾಯಾಗ್ರಹಣ ಧನರಾಜ್ ಚವ್ಹಾಣ್, ಸಹ ನಿರ್ದೇಶಕ ವಿಜಯ್, ಭರತ್, ಶಿವರಾಜ್ ಸೆಲ್ವಾ, ಅಂಜನಪ್ಪ, ನಾಯಕ (ಹಿರೋ) ರಾಮು, ಎರಡನೇ ನಾಯಕ ಶಂಕರ್, ಷಣ್ಮುಖ, ಎಂ.ಪ್ರಭಾಕರ್, ಶಿಲ್ಪಾ ಮೂರ್ತಿ, ಪೂಜಾ, ಸುಮಾ, ಚೇತನ್ ಶೆಟ್ಟಿ, ಸಂಗೀತಾ, ಅರ್ಚನಾ ಅಚ್ಚು ಇತರರು ಚಿತ್ರ ತಂಡದಲ್ಲಿದ್ದಾರೆ.
ಬಿಜೆಪಿ ಮುಖಂಡ ಕೆ.ವಿ.ಅಣ್ಣಪ್ಪ, ಪಾಲಿಕೆ ಸದಸ್ಯರಾದ ವಿಶ್ವನಾಥ್, ರಾಜು ಸೇರಿ ಚಿತ್ರ ತಂಡ ಪೂಜೆಯಲ್ಲಿ ಪಾಲ್ಗೊಂಡಿತ್ತು.
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.