ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಎಲ್ಲರೂ ದೀಪಾವಳಿ ಹಬ್ಬದ ಗುಂಗಿನಲಿÀದ್ದಾಗ ಕಳ್ಳರು ತಮ್ಮ ಕೈಚಳ ತೋರಿಸಿದ್ದು, ಭದ್ರಾವತಿಯ ವಿವಿಧೆಡೆ ಶುಕ್ರವಾರ ಬೆಳಗಿನ ಜಾವ ಕಳ್ಳತನ ಮಾಡಲಾಗಿದೆ.
ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಮೂರು ಪ್ರಕರಣಗಳಲ್ಲಿ ಬೈಕಿನಲ್ಲಿ ಬಂದವರು ವಿಳಾಸ ಕೇಳುವ ನೆಪದಲ್ಲಿ ಹಲ್ಲೆ ನಡೆಸಿ ದೋಚಿಸಿದ್ದಾರೆ.
ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಬೆಂಗಳೂರಿನಿಂದ ಭದ್ರಾವತಿಗೆ ಶುಕ್ರವಾರ ಬೆಳಗ್ಗೆ 4 ಗಂಟೆಗೆ ಪರಶುರಾಮ್ ಬಂದಿದ್ದಾರೆ. ನಗರಸಭೆ ಹತ್ತಿರ ಇಳಿದುಕೊಂಡಿದ್ದಾಗ ಮೂವರು ದುಷ್ಕಮಿಗಳು ತರೀಕೆರೆಗೆ ಹೋಗುವ ಮಾರ್ಗವನ್ನು ಕೇಳಿದ್ದಾರೆ. ತದನಂತರ, ಚಾಕು ತೋರಿಸಿ ಮೊಬೈಲ್, 10,220 ನಗದು, ಎಟಿಎಂ ಕಸಿದು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಪರಶುರಾಮ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಚಿನ್ನದ ತಾಳಿ ಕದ್ದೊಯ್ದ ಕಳ್ಳರು
ಇನ್ನೊಂದು ಪ್ರಕರಣದಲ್ಲಿ ಬಳ್ಳಾರಿಯಿಂದ ಭದ್ರಾವತಿಗೆ ಆಗಮಿಸಿದ ಉಮಾವತಿ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಭದ್ರಾವತಿಯ ಅಂಗಡಿಯೊಂದರ ಬಳಿ ಇಳಿದುಕೊಂಡು ಬೆಳಗ್ಗೆ 4.15ರ ಹೊತ್ತಿಗೆ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಯುವಕರು ಸಾಗರಕ್ಕೆ ಹೋಗುವ ಮಾರ್ಗ ಕೇಳಿದ್ದಾರೆ. ವಿಳಾಸ ಹೇಳುತ್ತಿದ್ದಾಗ ಮಾಂಗಲ್ಯ ಸರವನ್ನು ಕಸಿದುಕೊಳ್ಳಲಾಗಿದೆ. ಪ್ರತಿರೋಧ ಒಡ್ಡಿದ್ದಕ್ಕೆ ಮಹಿಳೆಯನ್ನು ತಳ್ಳಲಾಗಿದೆ. ಇದರಿಂದ ಚಿನ್ನದ ತಾಳಿಯ ಒಂದು ತುಂಡು ಮಾತ್ರ ಕಳ್ಳರ ಕೈಸೇರಿದ್ದು, ಇನ್ನುಳಿದಿದ್ದು ಇವರ ಬಳಿಯೇ ಉಳಿದುಕೊಂಡಿದೆ. ಅಂದಾಜು 30,000 ಮೌಲ್ಯದ ಚಿನ್ನ ಕಳವು ಮಾಡಲಾಗಿದೆ.
READ | ಮಾಚೇನಹಳ್ಳಿ ಬಳಿ ಭೀಕರ ಅಪಘಾತ, ಭದ್ರಾವತಿಯ ಇಬ್ಬರು ಯುವಕರ ಸಾವು
ಚಾಕುವಿನಿಂದ ಹಲ್ಲೆ ಮಾಡಿ ದರೋಡೆ
ತರೀಕೆರೆ ರಸ್ತೆಯಲ್ಲಿರುವ ಕೋರಿಯರ್ ಸಂಸ್ಥೆಯೊಂದರ ನೌಕರ ರಘು ಎನ್ನುವವರ ಮೇಲೆ ಹಲ್ಲೆ ನಡೆಸಿ 3,000 ನಗದು ದೋಚಲಾಗಿದೆ. ಬೆಳಗ್ಗೆ ಬಂದಿದ್ದ ಪಾರ್ಸಲ್ ಲೋಡ್ ಅನ್ನು ತೆಗೆಸುತ್ತಿದ್ದಾಗ ಕೋರಿಯರ್ ವೊಂದರ ವಿಳಾಸವನ್ನು ಕೇಳುವ ನೆಪದಲ್ಲಿ ರಘು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಕುವಿನಿಂದ ದಾಳಿ ಮಾಡಿದ್ದು, ಅವರ ಕೈಗೆ ಗಾಯವಾಗಿದೆ. ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2021/10/17/husband-killed-his-wife-near-gadikoppa/