ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಕಳೆದ ತಿಂಗಳ 29ರಂದು ವಾದಿ ಹುದಾ ಮೂರನೇ ಕ್ರಾಸಿನಲ್ಲಿ ರೌಡಿಶೀಟರ್ ವೊಬ್ಬನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ.
ವಾದಿ ಎ ಹುದಾ ನಿವಾಸಿ ರೌಡಿಶೀಟರ್ ಮೊಹಮ್ಮದ್ ಜೈದಾನ್(22) ಎಂಬಾತನ ಕೊಲೆ ಪ್ರಕರಣವನ್ನು ತುಂಗಾನಗರ ಪೊಲೀಸ್ ಇನ್ಸ್ ಪೆಕ್ಟರ್ ನೇತೃತ್ವದ ತಂಡ ಬೇಧಿಸಿದ್ದು, ಇಬ್ಬರನ್ನು ಬಂಧಿಸಿದೆ.
READ | ಶಿವಮೊಗ್ಗದಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ, ದೀಪಾವಳಿಗೆ ಇಂಧನ ಶಾಕ್
ಯಾರ್ಯಾರ ಬಂಧನ?
ಲಷ್ಕರ್ ಮೊಹಲ್ಲಾ ನಿವಾಸಿ ಮೊಹಮ್ಮದ್ ನಖಿ ಅಲಿ(23),ಇಲಿಯಾಸ್ ನಗರದ ಮೊಹಮ್ಮದ್ ಅಬು ಸ್ವಲೇಹ(22) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ ಆಯುಧ, ಬೈಕ್ ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೈದಾನ್ ಸಹಚರರು ಮೊಹಮ್ಮದ್ ನಖಿ ಅಲಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಕಾರಣಕ್ಕೆ ದ್ವೇಷ ತೀರಿಸಿಕೊಳ್ಳಲು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.