ಸುದ್ದಿ ಕಣಜ.ಕಾಂ | TALUKA | CRIME NEWS
ಶಿವಮೊಗ್ಗ: ದನಗಳನ್ನು ಅಕ್ರಮವಾಗಿ ಸಾಗಿಸುತಿದ್ದವರನ್ನು ತಡೆಯಲು ಹೋದವರ ಮೇಲೆ ವಾಹನ ಹತ್ತಿಸಿದ ಇಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ.
ಟಿಪ್ಪುನಗರ ನಿವಾಸಿ ನವೀದ್(29), ತೀರ್ಥಹಳ್ಳಿ ತಾಲೂಕಿನ ಹೆಗ್ಗೂರು ಗ್ರಾಮದ ಶ್ರೀಧರ್ (49) ಎಂಬುವವರನ್ನು ಬಂಧಿಸಲಾಗಿದೆ. ಒಟ್ಟು 4,ಹಸು, 1 ಹೋರಿಕರು ಹಾಗೂ 2 ಎಮ್ಮೆಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಅಶೋಕ ಲೈ ಲ್ಯಾಂಡ್ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
READ | ಅಡುಗೆ ಅನಿಲ ಬೆಲೆಯಲ್ಲಿ ನಿರಂತರ ಏರಿಕೆ, ಕಳೆದ 10 ತಿಂಗಳ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ
ವಾಹನ ತಡೆಯಲು ಹೋದಾಗ ಆಕ್ಸಿಡೆಂಟ್
ಮಾಳೂರು ಕಡೆಯಿಂದ ಬೆಜ್ಜುವಳ್ಳಿ ಕಡೆಗೆ ಅಶೋಕ ಲೈ ಲ್ಯಾಂಡ್ ವಾಹನದಲ್ಲಿ ಹಸು, ಎಮ್ಮೆ ಹಾಗೂ ಹೋರಿ ಕರುಗಳನ್ನು ಕಳ್ಳತನದಿಂದ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು, ಸದರಿ ಗೂಡ್ಸ್ ವಾಹನವನ್ನು ತಡೆಯಲು ತೀರ್ಥಹಳ್ಳಿಯ ವಾಸಿಗಳಾದ ಇಬ್ಬರು ಯುವಕರು ಬೈಕ್ ನಲ್ಲಿ ಹಿಂಬಾಲಿಸಿದ್ದಾರೆ.
ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತಿದ್ದ ವಾಹನ ತಡೆಯಲು ಯತ್ನಿಸಿದಾಗ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಜ್ಜುವಳ್ಳಿಯ ಶ್ರೀ ದುರ್ಗಾ ದೇವಿ ಮಿಲ್ಟ್ರಿ ಹೋಟೆಲ್ ಹತ್ತಿರ ರಸ್ತೆಯಲ್ಲಿ ಬೈಕ್ ಸವಾರರನ್ನು ಸಾಯಿಸುವ ಉದ್ದೇಶದಿಂದ ಅವರಿಗೆ ವಾಹನದಿಂದ ಡಿಕ್ಕಿ ಹೊಡೆಯಲಾಗಿದೆ. ಪರಿಣಾಮವಾಗಿ ಬೈಕ್ ನಲ್ಲಿದ್ದ ಇಬ್ಬರಿಗೂ ತೀವ್ರ ಸ್ವರೂಪದ ಗಾಯಗಳಾಗಿರುತ್ತದೆ ಎಂದು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಕಲಂ 379,307 ಸಹಿತ 34, ಕಲಂ 4, 11 ಅಡಿ ದ ಕರ್ನಾಟಕ ಪ್ರಿವೆನ್ಶನ್ ಆಫ್ ಸ್ಲಟರ್ ಆ್ಯಂಡ್ ಪ್ರಿವೆಷನ್ ಆಫ್ ಕ್ಯಾಟಲ್ ಆರ್ಡಿನೆನ್ಸ್ 2020 ರೀತ್ಯಾ ಪ್ರಕರಣವನ್ನು ದಾಖಲಿಸಲಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದನಗಳ್ಳರ ತಡೆಯಲು ಹೋದ ಯುವಕರ ಮೇಲೆಯೇ ವಾಹನ ಹತ್ತಿಸಿದ ಖದೀಮರು, ಆತಂಕ ಸೃಷ್ಟಿಸಿದ ಘಟನೆ