ಸುದ್ದಿ ಕಣಜ.ಕಾಂ | CITY| CRIME NEWS
ಶಿವಮೊಗ್ಗ: ನಗರದ ವಿವಿಧೆಡೆ ಇಬ್ಬರ ಶವಗಳು ಸಿಕ್ಕಿದ್ದು, ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಪ್ರಕರಣ 1
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾವೀರ ಸರ್ಕಲ್ ದರ್ಗಾದ ಬಳಿ ಮಲಗಿದ್ದಲ್ಲೇ ಆರೋಗ್ಯ ವ್ಯತ್ಯಾಸದಿಂದ ಬಳಲುತ್ತಿದ್ದ 67 ವರ್ಷದ ಅಪರಿಚಿತ ಮಹಿಳೆಯನ್ನು ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 9 ರಂದು ಮೃತಪಟ್ಟಿದ್ದಾರೆ. ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
READ | ಮಾಂಸ ಮಾರಾಟ ಮಾಡುತ್ತಿದ್ದ 6 ಜನ ಅರೆಸ್ಟ್, ಗಂಭೀರತೆ ಪಡೆದ ತೀರ್ಥಹಳ್ಳಿ ದನಗಳ್ಳತನ ಕೇಸ್, ಯಾವ ಠಾಣೆಯಲ್ಲಿ ಎಷ್ಟು ಕೇಸ್
ಮಹಿಳೆಯು 5.4 ಅಡಿ ಎತ್ತರವಿದ್ದು, ಗೋದಿ ಮೈಬಣ್ಣ, ತೆಳ್ಳನೇಯ ಮೈಕಟ್ಟು ಹೊಂದಿದ್ದು, ಕೇಸರಿ ಬಣ್ಣದ ಟಾಪ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈಕೆಯ ವಾರಸುದಾರರು ಪತ್ತೆಯಾದಲ್ಲಿ ಜಯನಗರ ಪೊಲೀಸ್ ಠಾಣೆ ದೂ.ಸಂ.: 08182- 261400, 261413,261416 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಜಯನಗರ ಠಾಣಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣ 2
ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪದ್ಮ ಟಾಕೀಸ್ ಹತ್ತಿರ ರಸ್ತೆ ಪಕ್ಕದಲ್ಲಿ ಮಲಗಿದ್ದಲ್ಲೇ ಆರೋಗ್ಯ ವ್ಯತ್ಯಾಸದಿಂದ ಬಳಲುತ್ತಿದ್ದ 27 -30 ವರ್ಷದ ರಾಮು ಬಸವರಾಜ್ ಎಂಬಾತ ಮೃತಪಟ್ಟಿದ್ದಾನೆ.
ಅಸ್ವಸ್ಥಗೊಂಡಿದ್ದ ಈತನನ್ನು ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 28 ರಂದು ಮೃತಪಟ್ಟಿರುತ್ತಾರೆ.
READ | ಗಾಂಜಾ ಮಾರಾಟ, ತಂಡ ಪಾನೀ ಸೇರಿ ಇಬ್ಬರು ಅರೆಸ್ಟ್, ದೊಡ್ಡಪೇಟೆ ಪೊಲೀಸರ ಕಾರ್ಯಾಚರಣೆ
ಮೃತ ವ್ಯಕ್ತಿಯು 5.3 ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ತೆಳುವಾದ ಮೈಕಟ್ಟು, ತಲೆಯಲ್ಲಿ ಕಪ್ಪು ಬಿಳಿ ಮಿಶ್ರಿತ ಕೂದಲು ಹೊಂದಿದ್ದು, ಎದೆಯ ಮೇಲೆ ಶಿಲುಬೆ ಚಿತ್ರದ ಕಪ್ಪು ಹಚ್ಚೆ ಹಾಕಿದ ಗುರುತು ಇದೆ.
ಮಾಸಲು ಬಣ್ಣದ ಲುಂಗಿ ಧರಿಸಿರುತ್ತಾರೆ. ಗುರುತು ಪತ್ತೆಯಾದರೆ ಜಯನಗರ ಪೊಲೀಸ್ ಠಾಣೆ ದೂ.ಸಂ.: 08182-261400, 261413, 261416 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
https://www.suddikanaja.com/2021/06/17/fire-in-vandana-takees/