ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ನಗರದ ರೈಲ್ವೆ ಸ್ಟೇಷನ್ ವಾಹನಗಳ ಪಾರ್ಕಿಂಗ್ ಹತ್ತಿರದ ಗಾಂಜಾ ಮಾರಾಟ ಮಾಡುತಿದ್ದ ನಾಲ್ವರನ್ನು ಪೊಲೀಸರು ಶನಿವಾರ ಮಧ್ಯಾಹ್ನ ಬಂಧಿಸಿದ್ದಾರೆ.
ಶಿವಮೊಗ್ಗದ ಹೊಸಮನೆಯ ನವೀನ್(28), ಶಿಕಾರಿಪುರ ಪಟ್ಟಣದ ಪ್ರದೀಪ್(25), ಶಿಕಾರಿಪುರದ ಹಳಿಯೂರು ಹೊಸಕೇರಿನ ಗಿರೀಶ್(29), ಸೊರಬ ತಾಲೂಕಿನ ಇಂಡಳ್ಳಿಯ ಬಸವರಾಜಪ್ಪ(48) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿತರಿಂದ ಅಂದಾಜು ₹38,000 ಮೌಲ್ಯದ ಒಟ್ಟು 1 ಕೆಜಿ 59 ಗ್ರಾಂ ತೂಕದ ಒಣ ಗಾಂಜಾ, 5 ಮೊಬೈಲ್ ಫೋನ್, ₹500 ನಗದು ಮತ್ತು ಕೃತ್ಯಕ್ಕೆ ಬಳಸಿದ 2 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
READ | ಶಿವಮೊಗ್ಗದ ATNC ಕಾಲೇಜಿನಲ್ಲಿ ಉದ್ಯೋಗ ಮೇಳ, ಎಷ್ಟು ಕಂಪನಿ ಭಾಗವಹಿಸಲಿವೆ?
ವಾಹನ ನಿಲುಗಡೆಯ ಜಾಗದಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಜಯನಗರ ಪಿಎಸ್.ಐ ಸಿಬ್ಬಂದಿಗಳ ತಂಡವು ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.