ಸುದ್ದಿ ಕಣಜ.ಕಾಂ | TALUK | CRIME NEWS
ಹೊಸನಗರ: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಲಾಗಿದೆ.
ಬೀದರಳ್ಳಿ ರಸ್ತೆ ಗರ್ತಿಕೆರೆ ನಿವಾಸಿಗಳಾದ ಕೃಷ್ಣ (45), ಫಯಾಜ್ (37) ಬಂಧಿತರು. ಗರ್ತಿಕೆರೆ ಗ್ರಾಮದ ಸತೀಶ್ ಶೆಟ್ಟಿ (55) ಎಂಬುವವರ ಕೊಲೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಹಳೆ ವೈಷಮ್ಯ ಕೊಲೆಗಾಗಿ ಪ್ಲ್ಯಾನ್
ಸತೀಶ್ ಶೆಟ್ಟಿ, ಫಯಾಜ್ ಮತ್ತು ಕೃಷ್ಣ ಸ್ನೇಹಿತರಾಗಿದ್ದು ಕೂಲಿ ಕೆಲಸಕ್ಕೆ ಜೊತೆಯಲ್ಲಿಯೇ ಹೋಗುತ್ತಿದ್ದರು. ಈ ಹಿಂದೆ ಸತೀಶ್ ಶೆಟ್ಟಿಯು ಕೃಷ್ಣನನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಿದ್ದಾನೆ. ಕೂಲಿಯ ದುಡ್ಡು ಕೊಡುವಂತೆ ಸತೀಶ್ ಶೆಟ್ಟಿಗೆ ಕೃಷ್ಣ ಕೇಳಿದ್ದು, ಯಾವುದೇ ದುಡ್ಡು ಕೊಡಬೇಕಾಗಿಲ್ಲ. ಈಗಾಗಲೇ ಕೊಟ್ಟಿದ್ದೇನೆ ಎಂದು ಹೇಳಿರುತ್ತಾನೆ.
ಡಿ.22-ರಂದು ರಾತ್ರಿ ಕಾಡಿನಲ್ಲಿ ಮರ ಕಡಿದುಕೊಂಡು ಬರೋಣ ಎಂದು ಹೇಳಿ ಕೃಷ್ಣ ಮತ್ತು ಫಯಾಜ್ ಅವರು ಸತೀಶ್ ಶೆಟ್ಟಿಯನ್ನು ಕೆರೆಯ ಏರಿಯಾ ಹತ್ತಿರ ಕರೆದುಕೊಂಡು ಹೋಗಿದ್ದಾರೆ. ಮೂರು ಜನರು ಸೇರಿ ಕುಡಿದು ನಂತರ ಕೃಷ್ಣ ಹಾಗೂ ಫಯಾಜ್ ಇಬ್ಬರೂ ಕುಡಿದ ಅಮಲಿನಲ್ಲಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ತಾವು ತಂದಿದ್ದ ಕತ್ತಿಯಿಂದ ಸತೀಶ್ ಶೆಟ್ಟಿಯ ತಲೆಯ ಹಿಂಭಾಗಕ್ಕೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ನಂತರ, ದೇಹವನ್ನು ಕೆರೆಗೆ ಹಾಕಿ ಬಂದಿರುತ್ತಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಹೊಸನಗರ ವೃತ್ತ ಸಿಪಿಐ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2021/02/03/3-thousand-rupees-penalty-for-beating-cattle-in-teerthahalli/