ಸುದ್ದಿ ಕಣಜ.ಕಾಂ | KARNATAKA | WILD LIFE
ಶಿವಮೊಗ್ಗ: ಪಶುವೈದ್ಯಕೀಯ ಕಾಲೇಜಿನ ಪ್ರಯೋಗಾಲಯದಲ್ಲಿ ಸಂಗ್ರಹಿಸಿಟ್ಟಿದ್ದ ವನ್ಯಜೀವಿಗಳ ಅಂಗಾಂಗಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವನ್ಯಜೀವಿಗಳ ಸುಮಾರು 70 ಅಂಗಾಂಗಗಳು ಇಲ್ಲಿ ಪತ್ತೆಯಾಗಿವೆ.
ಅರಣ್ಯ ಸಂರಕ್ಷಣಾಧಿಕಾರಿ ವೀರೇಶ್ ಗೌಡ ನೇತೃತ್ವದಲ್ಲಿ ಶಿವಮೊಗ್ಗ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ, ಪತ್ತೆಯಾಗಿರುವ ಅಂಗಾಂಗಗಳನ್ನು ವಶಕ್ಕೆ ಪಡೆದಿದ್ದಾರೆ.
ಹುಲಿ ಮರಿ, ಆಮೆ, ಹಾರ್ನ್ ಬಿಲ್, ಆನೆ ಸೊಂಡಿಲು, ಚಿರತೆ ಚರ್ಮ ಹೀಗೆ ವಿವಿಧ ವನ್ಯಜೀವಿಗಳ ಅಂಗಾಂಗಗಳು ಪತ್ತೆಯಾಗಿವೆ. ಅವುಗಳನ್ನು ಈಗಾಗಲೇ ಪಟ್ಟಿ ಮಾಡಿ, ಪ್ರಕರಣವನ್ನು ದಾಖಲಿಸಲಾಗಿದೆ.
ಶೆಡ್ಯೂಲ್ 1ಕ್ಕೆ ಸೇರಿದ ವನ್ಯ ಜೀವಿಗಳ ಅಂಗಾಂಗಗಳನ್ನು ಯಾವುದೇ ಪರವಾನಗಿ ಪಡೆಯದೇ ಸಂಗ್ರಹಿಸುವಂತಿಲ್ಲ. ಆದರೆ, ಇಷ್ಟೊಂದು ವನ್ಯ ಪ್ರಾಣಿಗಳ ಅಂಗಾಂಗಗಳು ಇಲ್ಲಿಗೆ ಹೇಗೆ ಬಂದವು ಎಂಬುವ ವಿಷಯಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ.
‘ಹಲವೆಡೆ ಮೃತಪಟ್ಟ ವನ್ಯಜೀವಿಗಳ ಮರಣೋತ್ತರ ಪರೀಕ್ಷೆ ಬಳಿಕ ಅವುಗಳ ಅಂಗಾಂಗಗಳನ್ನು ತಂದಿರಬಹುದಾದ ಸಾಧ್ಯತೆಯೂ ಇದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಕೊರೊನಾ 2ನೇ ಅಲೆ ಅತಿ ಹೆಚ್ಚು ಕಾಡಿದ್ದು ಯಾವ ತಾಲೂಕಿಗೆ ಗೊತ್ತಾ? 2 ತಿಂಗಳಲ್ಲಿ 52 ಸಾವಿರ ಜನರಿಗೆ ಕಾಡಿದ ಕೊರೊನಾ!