ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಯೊಬ್ಬರು ಶನಿವಾರ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಬಲೆಗೆ ಬಿದಿದ್ದಾರೆ.
ಹಣಕಾಸು ಅಧಿಕಾರಿ ಕೆ.ಗಣೇಶಪ್ಪ ಲಂಚ ಸ್ವೀಕರಿಸುವಾಗ ಎಂಬುವವರ ಮೇಲೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಯಾವುದಕ್ಕಾಗಿ ಲಂಚ
ಗಣೇಶಪ್ಪ ಅವರು ಟ್ರಾವೆಲ್ ಏಜೆನ್ಸಿಯ ಕಾರು ಚಾಲಕನಿಗೆ ಬಿಲ್ ಪಾಸ್ ಮಾಡಬೇಕಾದರೆ 1 ಲಕ್ಷ ರೂ. ಬಿಲ್ ಗಾಗಿ 5 ಸಾವಿರ ರೂ. ಬೇಡಿಕೆ ಇಟಿದ್ದರು.