ಸುದ್ದಿ ಕಣಜ.ಕಾಂ | TALUK | PROGRAM NEWS
ತೀರ್ಥಹಳ್ಳಿ: ತಾಲೂಕಿನ ಹಣಗೆರೆಕಟ್ಟೆ ಕೆರೆಹಳ್ಳಿ ಗ್ರಾಮದಲ್ಲಿ ನಟ ಪುನೀತ್ ರಾಜಕುಮಾರ್ ನುಡಿನಮನ ಕಾರ್ಯಕ್ರಮ ಹಾಗೂ ಸರ್ಜಿಕಲ್ ಸ್ಟ್ರೈಕ್ ರೂವಾರಿ ಬಿಪಿನ್ ರಾವತ್ ಸಿಂಗ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮ ನಡೆಯಿತು.
READ | ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ನಲ್ಲಿ ಉದ್ಯೋಗ ಅವಕಾಶ, ಪೂರ್ಣ ಮಾಹಿತಿಗಾಗಿ ಓದಿ
ವೀರಸೇನಾನಿಗಳ ತ್ಯಾಗ ಬಲಿದಾನಗಳನ್ನು ನೆನಪಿಸ ಲಾಯಿತು. ಹಣಗರೆಯಿಂದ ಕೆರೆಹಳ್ಳಿ ಹೋಗುವ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಯಿತು. ಇದನ್ನು ಗ್ರಾಮದಲ್ಲಿಯ ಎಲ್ಲ ಮಾಜಿ ಹಾಗೂ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಜ್ಯೋತಿ ಬೆಳಗಿಸಿ ಗ್ರಾಮದ ಅಂಗನವಾಡಿ ಮಕ್ಕಳಿಂದ ಅನಾವರಣ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುನ್ನೂರಕ್ಕೂ ಹೆಚ್ಚು ಜನ ಆಗಮಿಸಿದ್ದರು. ವಿಜಯ ಆರ್ ಸೋಗೆದ್, ಸಂದೀಪ್ ಬೆಸೂರು, ಅಜಿತ್, ಅಭಿಷೇಕ ಬೆಸೂರ್, ದಿವಾಕರ್ ಕುಡ್ಲಕೊಪ್ಪ, ಸುನೀಲ್, ಅಂಗಡಿ ಅಣ್ಣಪ್ಪ, ರಮೇಶ್ ಹಣಗರೆ, ಏಕಾನಂದ್, ಉದಯ, ಕೆ.ಎಂ.ಲೋಕೇಶ್, ಪವನ್ ಉಪಸ್ಥಿತರಿದ್ದರು.