ಸುದ್ದಿ ಕಣಜ.ಕಾಂ | DISTRICT | COURT NEWS
ಶಿವಮೊಗ್ಗ: ಇಬ್ಬರನ್ನು ಗಡಿಪಾರು ಮಾಡಿ ಶಿವಮೊಗ್ಗ ಉಪವಿಭಾಗದ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಆದೇಶಿಸಿದ್ದಾರೆ.
ನವುಲೆ ಮಾರುತಿ ಬಡಾವಣೆಯ ಹೊಸಮನೆ 4ನೇ ತಿರುವಿನ ನಿವಾಸಿ ಸಚ್ಚಿನ್ ಎಸ್. ಸ್ಯಾಡೋ ಹಾಗೂ ಅಣ್ಣಾನಗರ 5ನೇ ತಿರುವು ನಿವಾಸಿ ಆರ್.ಹರೀಶ್ ಅಲಿಯಾಸ್ ತೇಗು ಎಂಬುವವರನ್ನು ಕರ್ನಾಟಕ ಪೊಲೀಸ್ ಕಾಯ್ದೆ ಅಧಿನಿಯಮ 1963 ಕಲಂ 55 ರನ್ವಯ ಉಪ ವಿಭಾಗ ಸರಹದ್ದಿನಿಂದ ಹಾಗೂ ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
READ | ಶಿವಮೊಗ್ಗದಲ್ಲಿ ನಿಷೇದಾಜ್ಞೆ ಜಾರಿ, ಏನೇನು ನಿಯಮಗಳು ಅನ್ವಯ?
ಮೇಲ್ಕಂಡ ಇಬ್ಬರು ಆರೋಪಿಗಳು ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು, ಪೊಲೀಸ್ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿರುತ್ತವೆ.
ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ ಸಚ್ಚಿನ್ ಎಸ್. ಸ್ಯಾಡೋಗೆ 6 ತಿಂಗಳು ಹಾಗೂ ಹರೀಶ್ ಗೆ ಮೂರು ತಿಂಗಳು ಗಡಿಪಾರು ಮಾಡಲಾಗಿದೆ.