ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ವ್ಯಾಪಾರಕ್ಕೆ ಸರ್ಕಾರದ ಮುದ್ರಾ ಯೋಜನೆ ಅಡಿ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುವ ಘಟನೆ ನಡೆದಿದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯು ಶಿವಮೊಗ್ಗದ ದುರ್ಗಿಗುಡಿ ನಿವಾಸಿಯೊಬ್ಬರಿಗೆ ಮೋಸ ಮಾಡಿದ್ದಾರೆ. ವ್ಯಾಪಾರಕ್ಕೆ ಅಗತ್ಯವಿದ್ದಲ್ಲಿ ಪ್ರಧಾನ ಮಂತ್ರಿ ಮುದ್ರ ಯೋಜನೆ ಅಡಿ ₹10 ಲಕ್ಷದವರೆಗೆ ಸಾಲ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ.
READ | ಪೊಲೀಸರನ್ನು ಕಂಡು ಓಡಿಹೋಗಲು ಯತ್ನಿಸಿದ ಮೂವರು ಅರೆಸ್ಟ್, ಅವರ ಬಳಿ ಸಿಕ್ಕಿದ್ದೇನು?
ಪ್ರೊಸೆಸಿಂಗ್ ಚಾರ್ಜ್ ಹೆಸರಿನಲ್ಲಿ ಮೋಸ
ಸಾಲ ಮಂಜೂರು ಮಾಡಬೇಕಾದರೆ ಈ ಪ್ರಕ್ರಿಯೆಗಾಗಿ ಪ್ರೊಸಿಸಿಂಗ್ ಚಾರ್ಜ್ ತಗುಲುತ್ತದೆ. ಹಾಗಾಗಿ ₹23,146 ಖಾತೆಗೆ ಸಂದಾಯ ಮಾಡುವಂತೆ ಬ್ಯಾಂಕ್ ಖಾತೆಯ ಮಾಹಿತಿ ನೀಡಿದ್ದಾರೆ. ಅದರಂತೆ, ಹಣ ನೀಡಲಾಗಿದೆ. ಆದರೆ ಹಣ ಪಡೆದ ಬಳಿಕವೂ ಯಾವುದೇ ರೀತಿಯ ಲೋನ್ ಮಂಜೂರು ಮಾಡದೇ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.