ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಪುರಲೆ ಗ್ರಾಮದಲ್ಲಿ ಪೊಲೀಸರನ್ನು ಕಂಡು ಓಡಿಹೋಗಲು ಯತ್ನಿಸಿದ ಮೂವರನ್ನು ಶನಿವಾರ ಸಂಜೆ ಬಂಧಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಜಗಳೂರಿನ ಸುರೇಶ್(40), ಚಿತ್ರದುರ್ಗದ ಚಳ್ಳಕೆರೆ ನಿವಾಸಿ ತಿಪ್ಪೇಶ್ ಯಾದವ್(27) ಹಾಗೂ ಟಿಪ್ಪುನಗರದ ಮುಬಾರಕ್ ಅಲಿಯಾಸ್ ರೂಪಾಯಿ (20) ಬಂಧಿತರು. ಆರೋಪಿಗಳ ಬಳಿಯಿಂದ ಅಂದಾಜು ₹61,200 ಮೌಲ್ಯದ ಒಟ್ಟು 2 ಕೆಜಿ 40 ಗ್ರಾಂ ಒಣ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
READ | ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಜಾಮೀನು ಅರ್ಜಿ ವಜಾ
ಖಚಿತ ಮಾಹಿತಿ ಮೇರೆಗೆ ದಾಳಿ
ಪುರಲೆ ಗ್ರಾಮದ ಹತ್ತಿರ ಖಾಲಿ ಬಡಾವಣೆಯೊಂದರಲ್ಲಿ ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ನಿಂತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್.ಐ ಮತ್ತು ಸಿಬ್ಬಂದಿ ತಂಡವು ದಾಳಿ ನಡೆಸಿದೆ. ಪೊಲೀಸರನ್ನು ಕಂಡಿದ್ದೇ ಯುವಕರ ತಂಡ ಓಡಿ ಹೋಗಲು ಯತ್ನಿಸಿದೆ. ಹಿಂಬಾಲಿಸಿ ಅವರನ್ನು ವಶಕ್ಕೆ ಪಡೆಯಲಾಗಿದೆ. ನಂತರ, ಪರಿಶೀಲಿಸಿದಾಗ ಆರೋಪಿತರ ಬಳಿ ಮಾದಕ ವಸ್ತು ಗಾಂಜಾ ದೊರೆತಿದೆ.
ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್. ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ.
https://www.suddikanaja.com/2021/12/01/two-accused-arrested-who-sale-ganja-at-gandharva-nagar-shivamogga/