ಸುದ್ದಿ ಕಣಜ.ಕಾಂ | KARNATAKA | CINEMA NEWS
ಶಿವಮೊಗ್ಗ: ನಗರದ ಪ್ರೆಸ್ ಟ್ರಸ್ಟ್ ನಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಚಿತ್ರನಟ ದೊಡ್ಡಣ್ಣ ಅವರು ಭದ್ರಾವತಿಯಲ್ಲಿ ಕಳೆದ ಕಾಲಗಳನ್ನು ನೆನಪಿಸಿಕೊಂಡರು.
ಅಲ್ಲಿ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಅವುಗಳನ್ನು ಹಂಚಿಕೊಂಡರು. ಉದ್ಯೋಗಕ್ಕಾಗಿ ಭದ್ರಾವತಿಗೆ ಬಂದಿದ್ದನ್ನು ಮೆಲಕು ಹಾಕಿದ ಅವರು, ಒಂದು ನಾಟಕದಿಂದಾಗಿ ಇಡೀ ಜೀವನವೇ ಬದಲಾಗಿದೆ. ಜೋಕುಮಾರ ಸ್ವಾಮಿ, ರನ್ನನ ಗದಾಯುದ್ಧ, ಕುವೆಂಪು ರಕ್ತಾಕ್ಷಿ ಮೊದಲಾದ ನಾಟಕಗಳಲ್ಲಿ ನಟಿಸಿದ್ದರ ಪರಿಣಾಮವಾಗಿ ಕನ್ನಡ ಚಿತ್ರದಲ್ಲಿ ಹೆಚ್ಚಿನ ಅವಕಾಶ ಲಭ್ಯವಾಯಿತು. ಇಡೀ ಕರ್ನಾಟಕ ತನ್ನನ್ನು ಗುರುತಿಸಬೇಕಾದರೆ ಮೂಲ ಕಾರಣ ‘ಶಿವಮೊಗ್ಗ’ ಎಂದು ಹೇಳಿದರು.
- ಕಲಾವಿದರಿಗೆ ಎಂತಹದ್ದೇ ಪಾತ್ರ ನೀಡಿದರೂ ಅದನ್ನು ಸಮರ್ಥವಾಗಿ ನಟಿಸಬೇಕು. ನಟನೆ ವೇಳೆ ಪರಕಾಯ ಪ್ರವೇಶವಾಗಬೇಕು. ಆಗ ಆ ಪಾತ್ರಕ್ಕೆ ಜೀವಂತಿಕೆ ಬರುತ್ತದೆ.
- ಇತ್ತೀಚಿನ ದಿನಗಳಲ್ಲಿ ಸತ್ಯ ಘಟನೆ ಆಧಾರಿತ ಕಥೆಗಳು ಕ್ಲಿಕ್ ಆಗುತ್ತಿವೆ. ಚಿತ್ರಗಳಲ್ಲಿ `ಪೋಷಕ ಪಾತ್ರ’ ಕಡಿಮೆ ಆಗುತ್ತಿದೆ. ಪೋಷಕ ಪಾತ್ರಗಳು ಹೆಚ್ಚಾಗಿದ್ದರೆ ಸಮಾಜಕ್ಕೆ ಉತ್ತಮ ಸಂದೇಶಗಳು ತಲುಪುತ್ತವೆ.
ಸುದ್ದಿ ಪ್ರಕಟಿಸುವಾಗ ಇರಲಿ ಎಚ್ಚರ
ಪತ್ರಕರ್ತರು ಸುದ್ದಿಗಳನ್ನು ಪ್ರಕಟಿಸಬೇಕಾದರೆ ಅದರ ಬಗ್ಗೆ ಎಚ್ಚರ ಇರಲೇಬೇಕು. ಇಲ್ಲದಿದ್ದರೆ ಪೇಚಿಗೆ ಸಿಲುಕಬೇಕಾಗುತ್ತದೆ ಎಂದು ಹಿರಿಯ ನ್ಯಾಯವಾದಿ ರೇವಣ ಸಿದ್ಧಯ್ಯ ಸಲಹೆ ನೀಡಿದರು.
ಸುದ್ದಿ ಮಾಡುವ ಮುನ್ನ ಅದರ ಸತ್ಯಾಸತ್ಯತೆ ಒರಹಚ್ಚಬೇಕು. ಸುದ್ದಿಗಳಿಂದ ಸಮಾಜಕ್ಕೆ ಸಹಾಯ ಆಗಬೇಕು. ಸುದ್ದಿಗಳಿಂದ ಯಾರಿಗೂ ಮಾನಹಾನಿ ಆಗಬಾರದು. ಅಂತಹ ವರದಿಗಳು ಹೆಚ್ಚು ಪ್ರಭಾವಶಾಲಿ ಆಗಿರುತ್ತವೆ ಎಂದು ಹೇಳಿದರು.
ಪತ್ರಿಕಾ ಭವನದಲ್ಲಿ ಗ್ರಂಥಾಲಯ ಸ್ಥಾಪನೆಗೆ ₹25 ಸಾವಿರ ನಗದು ಅಥವಾ ಅಷ್ಟೇ ಬೆಲೆಯ ಪುಸ್ತಕಗಳನ್ನು ನೀಡುವ ಭರವಸೆಯನ್ನು ರೇವಣಸಿದ್ದಯ್ಯ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್ಯದರ್ಶಿ ಎಸ್. ನಾಗರಾಜ್ ಉಪಸ್ಥಿತರಿದ್ದರು.
https://www.suddikanaja.com/2021/01/17/bollywood-actress-jacqueline-fernandez-visit-shivamogga-kimmane-golf-resort/