ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಗಟ್ಟಿಮಸ್ತಾದ ದೇಹದಾರ್ಢ್ಯ ಹೊಂದಿದ್ದ ಒಂಟಿ ಸಲಗವೊಂದು ಭಾನುವಾರ ವಿದ್ಯುತ್ ತಂತಿ ತಗುಲಿ ಅಸು ನೀಗಿದೆ.
ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪ ಮಲ್ಲಿಗೆನಹಳ್ಳಿ ಬಳಿ ತ್ಯಾಗದಬಾಗಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಗೆ ಒಳಪಡುವ ಜಮೀನುವೊಂದರಲ್ಲಿ 35-45 ವರ್ಷದ ಕಾಡಾನೆ ಮೃತಪಟ್ಟಿದ್ದು, ಸೋಮವಾರ ಬೆಳಗ್ಗೆ ಗಮನಕ್ಕೆ ಬಂದಿದೆ. ಬೆಳೆ ರಕ್ಷಣೆಗೆಂದು ಹಾಕಲಾಗಿದ್ದ ವಿದ್ಯುತ್ ತಂತಿ ಸೊಂಡಿಲಿಗೆ ತಗುಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
READ | ಮನೆಯಲ್ಲಿ ಮಂಗನ ಬರ್ತ್ ಡೇ, ಸಚಿವರು, ಸ್ವಾಮೀಜಿಗಳು ಭಾಗಿ, ಮಂಗಕ್ಕೆ ಭರ್ಜರಿ ಡ್ರೆಸ್ಸಿಂಗ್
ಅಕ್ರಮ ಜಮೀನು, ವಿದ್ಯುತ್ ಸಂಪರ್ಕ
ಅಕ್ರಮವಾಗಿ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದರು. ಅದಕ್ಕೆ ವಿದ್ಯುತ್ ತಂತಿ ಕೂಡ ಹಾಕಿದ್ದರು. ಅದು ಆನೆ ಕಾರಿಡಾರ್ ಆಗಿದ್ದು, ಆನೆ ಅರಣ್ಯಕ್ಕೆ ತೆರಳುವಾಗ ವಿದ್ಯುತ್ ತಂತಿಯು ಸೊಂಡಿಲಿಗೆ ತಗುಲಿದೆ. ಪರಿಣಾಮ ಆನೆ ಸ್ಥಳದಲ್ಲೇ ಮೃತಪಟ್ಟಿದೆ. ಸೋಮವಾರ ಮಧ್ಯಾಹ್ನದ ಹೊತ್ತಿಗೆ ಶಿವಮೊಗ್ಗ ವನ್ಯಜೀವಿ ವಿಭಾಗದ ಪಶು ವೈದ್ಯಾಧಿಕಾರಿ ಡಾ.ವಿನಯ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಘಮ್ಮನಗಟ್ಟಿ, ತರೀಕೆರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್, ವಲಯ ಅರಣ್ಯಾಧಿಕಾರಿ ಸತೀಶ್, ಗೌರವ ವನ್ಯಜೀವಿ ಪರಿಪಾಲಕ ಜಿ .ವೀರೇಶ್, ಲಿಂಗದಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ರವಿ ಸೇರಿದಂತೆ ಮೆಸ್ಕಾಂ ಆನೆ ಮೃತಪಟ್ಟಿರುವ ಸ್ಥಳಕ್ಕೆ ಭೇಟಿ ನೀಡಿದರು. ಮರಣೋತ್ತರ ಪರೀಕ್ಷೆ ನಡೆಸಿ ಆನೆಯ ಅಂತ್ಯಸಂಸ್ಕಾರ ಮಾಡಲಾಗಿದೆ.
ಆರೋಪಿ ಹಾಗೂ ಆತನ ತಾಯಿ ತಲೆ ಮರೆಸಿಕೊಂಡಿದ್ದು, ಇವರ ಮೇಲೆ ಪ್ರತ್ಯೇಕವಾಗಿ ಎರಡು ಪ್ರಕರಣಗಳು ದಾಖಲಾಗಿವೆ.
READ | ಮುದ್ರಾ ಯೋಜನೆ ಅಡಿ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ
ಒಂಟಿ ಸಲಗದ ದಂತ ತೂಕ 41 ಕೆಜಿ
ಅಂತ್ಯಸಂಸ್ಕಾರಕ್ಕೂ ಮುನ್ನ ಆನೆಯ ದಂತಗಳನ್ನು ತೆಗೆಯಲಾಗಿದ್ದು ಅದರ ತೂಕ 41 ಕೆಜಿ 600 ಗ್ರಾಂ ಎಂದು ತಿಳಿದುಬಂದಿದೆ. ಇದೇ ರೀತಿ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲೂ ಒಂದು ಆನೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿತ್ತು.
https://www.suddikanaja.com/2021/02/02/preparation-to-catch-wild-tusker-in-umblebailu-forest/