ಸುದ್ದಿ ಕಣಜ.ಕಾಂ | TALK | WILD ELEPHANT
ಶಿವಮೊಗ್ಗ: ಹಾಲ್ ಲಕ್ಕವಳ್ಳಿಯಲ್ಲಿ ಕಾಡಾನೆಗಳು ಶುಕ್ರವಾರ ರಾತ್ರಿ ತೋಟಗಳಿಗೆ ನುಗ್ಗಿದ್ದು, ಅಡಿಕೆ, ಬಾಳೆ ಸಸಿಗಳು ಬುಡಮೇಲು ಮಾಡಿವೆ.
ಆನಂದರಾಜ್ ಎಂಬುವವರ ತೋಟದಲ್ಲಿ ಎರಡು ಆನೆಗಳು 16 ಅಡಿಕೆ ಸಸಿಗಳನ್ನು ಹಾಳು ಮಾಡಿರುವುದಾಗಿ ಅಂದಾಜಿಲಸಾಗಿದೆ. ವೆ. ಹೆಜ್ಜೆ ಗುರುತು ಪ್ರಕಾರ, ದೊಡ್ಡ ಮತ್ತು ಮರಿ ಆನೆಗಳು ತೋಟಕ್ಕೆ ನುಗ್ಗಿರುವುದಾಗಿ ಶಂಕಿಸಲಾಗಿದೆ.
ಇತ್ತೀಚೆಗೆ, ಲಕ್ಕಿನಕೊಪ್ಪ, ಯರಗನಾಳ್, ಕಡೇಕಲ್, ಹಾಲ್ ಲಕ್ಕವಳ್ಳಿ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಕಾಡಾನೆಗಳ ದಾಂಧಲೆ ನಡೆಯುತ್ತಿದ್ದು, ತೋಟದ ಮಾಲೀಕರು ಆತಂಕದಲ್ಲಿದ್ದಾರೆ.