ಸುದ್ದಿ ಕಣಜ.ಕಾಂ | CITY | HANDICRAFT EXHIBITION
ಶಿವಮೊಗ್ಗ: ನಗರದ ಸೈನ್ಸ್ ಫೀಲ್ಡ್ ಮೈದಾನದಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ ವತಿಯಿಂದ ಜನವರಿ 6ರಿಂದ 12ರ ವರೆಗೆ `ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಉದ್ಯಮಿ ಸಂತೆ’ ಏರ್ಪಡಿಸಲಾಗಿದೆ ಎಂದು ವ್ಯವಸ್ಥಾಪಕ ಪ್ರಸನ್ನ ಕುಲಕರ್ಣಿ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಭದ ಉದ್ದೇಶವಿಲ್ಲದೇ ಸಣ್ಣ ಉದ್ದಿಮೆದಾರರಿಗೆ ಮಾರುಕಟ್ಟೆ ಒದಗಿಸಲು ಸಂತೆಯನ್ನು ಮಾಡಲಾಗುತ್ತಿದೆ. ಇದುವರೆಗೆ 200ಕ್ಕೂ ಹೆಚ್ಚು ಸಂತೆಗಳನ್ನು ಆಯೋಜಿಸಲಾಗಿದೆ ಎಂದರು.
ಸಂತೆಯಲ್ಲಿ ಏನೇನು ಲಭ್ಯವಾಗಲಿದೆ?
ಇಲ್ಲಿ ಬಟ್ಟೆ, ಮನೆ ಅಲಂಕಾರಿಕಾ ವಸ್ತು, ಸಿರಿಧಾನ್ಯ, ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು ಲಭ್ಯ ಇರಲಿವೆ.
75,000ಕ್ಕೂ ಹೆಚ್ಚಿನ ಮಂದಿಗೆ ಉದ್ಯೋಗ
ಸಣ್ಣ ಉದ್ದಿಮೆದಾರರು ತಮ್ಮ ವ್ಯವಹಾರ ವಿಸ್ತರಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. 13,000ಕ್ಕೂ ಹೆಚ್ಚು ಸಣ್ಣ ಉದ್ದಿಮೆದಾರರಿಗೆ ಮಾರ್ಗದರ್ಶನ ನೀಡಲಾಗಿದ್ದು, ಸುಮಾರು 75,000 ಜನರಿಗೆ ಉದ್ಯೋಗ ಲಭಿಸಿದೆ ಎಂದು ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಭೀಮಪ್ಪ, ಬಸವರಾಜ್ ಇದ್ದರು.