ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ (ks eshwarappa) ಅವರು ವಾರಾಂತ್ಯ ಕರ್ಫ್ಯೂ (weekend curfew) ಅನ್ನು ವಿರೋಧಿಸಿದ್ದಾರೆ.
ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
READ | ಕೊರೊನಾ ಕಂಟ್ರೋಲಿಗೆ ಖಡಕ್ ರೂಲ್ಸ್, ರಾಜ್ಯದಾದ್ಯಂತ ಟಫ್ ಗೈಡ್ ಲೈನ್ಸ್, ಇಲ್ಲಿದೆ ಕಂಪ್ಲೀಟ್ ಮಾಹಿತಿ
ವೀಕೆಂಡ್ ಕರ್ಫ್ಯೂ ವಿರೋಧಕ್ಕೆ ಟಾಪ್ 3 ಕಾರಣ
- ಬೆಂಗಳೂರಿನಲ್ಲಿ ಕೊರೊನಾ ವೈರಸ್ (corona virus) ಸೋಂಕು(infection) ಅಧಿಕವಿದೆ. ಅಲ್ಲಿ ಖಡಕ್ ನಿಯಮ ವಿಧಿಸಲಿ. ಅದಕ್ಕೆ ಸ್ವಾಗತವಿದೆ. ಆದರೆ, ನಿತ್ಯ 10ರೊಳಗೆ ಪಾಸಿಟಿವಿಟಿ ಇರುವ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ವಿಧಿಸಿರುವುದು ಸರಿಯಲ್ಲ.
- ಈಗಾಗಲೇ ವ್ಯಾಪಾರಿಗಳು ಈ ಹಿಂದಿನ ಎರಡು ಲಾಕ್ ಡೌನ್ (lockdown) ನಿಂದ ರೋಸಿದ್ದಾರೆ. ನಷ್ಟ ಅನುಭವಿಸಿದ್ದಾರೆ. ಈಗ ಪ್ರಕರಣಗಳಿರದಿದ್ದರೂ ಟಫ್ ರೂಲ್ಸ್ ವಿಧಿಸಿರುವುದು ಅಸಮಂಜಸ.
- ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ನಾನಾ ಜಿಲ್ಲೆಯ ಜನ ಸೋಂಕಿರದ ಜಿಲ್ಲೆಗೂ ವೀಕೆಂಡ್ ಕರ್ಫ್ಯೂ ಬೇಕಾ ಎಂದು ಪ್ರಶ್ನಿಸಿದ್ದಾರೆ. ಅವರಿಗೆ ಉತ್ತರಿಸುವುದೇ ಕಷ್ಟವಾಗಿದೆ. ಅವರೂ ಬೆಂಗಳೂರು ಲಾಕ್ ಮಾಡಿದರೆ, ಅಲ್ಲಿಗೆ ವ್ಯಾಪಾರಕ್ಕಾಗಿ ಹೋಗಲ್ಲ. ಮಾರ್ಗಸೂಚಿ (guidelines) ಯನ್ನು ಪಾಲಿಸುತ್ತೇವೆ ಎನ್ನುತಿದ್ದಾರೆ. ಹೀಗಾಗಿ, ಸರ್ಕಾರ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು.
ಸಂಪುಟದಲ್ಲಿ ಸಿಎಂಗೆ ಈ ಬಗ್ಗೆ ಮಾಹಿತಿ
ಜನರ ಅಭಿಮತ ಹಾಗೂ ವೀಕೆಂಡ್ ಕರ್ಫ್ಯೂದಿಂದ ಆಗಬಹುದಾದ ತೊಂದರೆಗಳ ಕುರಿತು ಸಂಪುಟ ಸಭೆ (bacinet meeting) ಯಲ್ಲಿ ಸಿಎಂ ಬಸವರಾಕ್ ಬೊಮ್ಮಾಯಿ (basavaraj bommia) ಗಮನಕ್ಕೆ ತರುವೆ. ಸೋಂಕು ರಹಿತ ಜಿಲ್ಲೆಗಳಿಗೆ ವಾರಾಂತ್ಯ ಕರ್ಫ್ಯೂದಿಂ ಸಡಿಲಿಕೆ ನೀಡಲು ಮನವಿ ಮಾಡುವೆ ಎಂದು ಈಶ್ವರಪ್ಪ ಭರವಸೆ ನೀಡಿದರು.
ಮೇಕೆದಾಟು (mekedatu) ಪಾದಯಾತ್ರೆ ಕೈಬಿಡಿ
ಇದು ಮೇಕೆದಾಟು ಹೆಸರಿನಲ್ಲಿ ರಾಜಕೀಯ ಮಾಡುವ ಹೊತ್ತಲ್ಲ. ಆದ್ದರಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇದರ ಬಗ್ಗೆ ಮರು ಸಮಾಲೋಚನೆ ಮಾಡಬೇಕು. ಹೋರಾಟಕ್ಕೆ ವೈಯಕ್ತಿಕವಾಗಿ ನನ್ನ ಬೆಂಬಲವೂ ಇದೆ. ಆದರೆ, ಈಗ ಪಾದಯಾತ್ರೆ ಮಾಡುವುದು ಬೇಡ ಎಂದು ಮನವಿ ಮಾಡಿದರು.
https://www.suddikanaja.com/2022/01/05/again-weekend-lock-in-shivamogga-due-to-covid-19-pandemic/